ಪೋಷಕರು, ವಿದ್ಯಾರ್ಥಿಗಳು ಮುಂದೆ ಬರಲಿ
‘ಮಕ್ಕಳ ಕಲಿಕಾ ಪ್ರಗತಿಯ ಹಿತದೃಷ್ಟಿಯಿಂದ ಫೇಲಾದವರ ಮರು ದಾಖಲಾತಿಗೆ ಅವಕಾಶ ನೀಡಲಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ದಾಖಲಾಗುತ್ತಿಲ್ಲ. ಪೋಷಕರು ಮುಂದೆ ಬಂದು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು’ ಎಂದು ಡಿಡಿಪಿಐ ಸೂರ್ಯಕಾಂತ ಮದಾನೆ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೆಲವು ಶಾಲೆಗಳಲ್ಲಿ ಒಂದೆರಡು ವಿದ್ಯಾರ್ಥಿಗಳು ಮರು ಪ್ರವೇಶ ಪಡೆದಿದ್ದರೆ ಹಲವೆಡೆ ಒಬ್ಬರೂ ದಾಖಲಾಗಿಲ್ಲ. ಈ ಬಗ್ಗೆ ಅರಿವು ಇರದವರು ಮನೆಯಲ್ಲಿ ಕುಳಿತಿದ್ದಾರೆ. ಕೆಲವರು ಐಟಿಐಗೆ ಸೇರಿದ್ದಾರೆ. ಶಾಲಾ ಶಿಕ್ಷಕರು ಸಹ ಫೇಲಾದ ವಿದ್ಯಾರ್ಥಿಗಳ ಪೋಷಕರ ಮನವೊಲಿಸಿ ಅವರನ್ನು ಮರು ದಾಖಲು ಮಾಡಿಕೊಳ್ಳುವಲ್ಲಿ ನಿರತವಾಗಿದ್ದಾರೆ’ ಎಂದರು.