<p><strong>ಕಾಳಗಿ:</strong> ಪಟ್ಟಣದ ಹಳೆ ಬಸ್ ನಿಲ್ದಾಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇನ್ನೊಂದಡೆ ಪಟ್ಟಣದಲ್ಲಿ ಹಂದಿ, ನಾಯಿಗಳ ಹಾವಳಿ ಮಿತಿಮೀರಿದೆ. </p>.<p>‘ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಹಾದುಹೋಗುವ ಇಲ್ಲಿ ನಿತ್ಯ ಒಂದಿಲ್ಲ ಒಂದು ಕಡೆಯಲ್ಲಿ ದನಗಳು ಓಡಾಡಿಕೊಂಡಿರುತ್ತವೆ. ಅದರಲ್ಲೂ ಹಳೆ ಬಸ್ ನಿಲ್ದಾಣದಲ್ಲಿ ಅವುಗಳ ಕಾಟ ವಿಪರೀತವಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಪಟ್ಟಣ ಪಂಚಾಯಿತಿ ಸಿಬ್ಬಂದಿ ಧ್ವನಿವರ್ಧಕದ ಮೂಲಕ ರಸ್ತೆಗೆ ದನಗಳು ಬಿಡದಂತೆ ಕಾವಲು ಮಾಡಲು ಅನೇಕ ಸಲ ಜನರಿಗೆ ತಿಳಿಹೇಳಿದ್ದಾರೆ. ಆದರೆ ವಾರಸುದಾರರು ಅವುಗಳನ್ನು ಮನೆಗೆ ಕೊಂಡೊಯ್ಯುವಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಬಜಾರ್, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತವಲ್ಲದೇ ಹೆದ್ದಾರಿಯ ಎಲ್ಲೆಂದರಲ್ಲಿ ಹಗಲು-ರಾತ್ರಿ ಎನ್ನದೆ ಬಿಡಾಡಿ ದನಗಳು ಕಂಡುಬರುತ್ತಿವೆ.</p>.<p>‘ಬಿಡಾಡಿ ದನಗಳಿಂದ ಸಣ್ಣ ವಾಹನಗಳ ನಿಲುಗಡೆ ಮತ್ತು ಸಂಚಾರಕ್ಕೆ ಮಾರಕವಾಗಿ ಕಾಡುತ್ತಿವೆ. ಅವುಗಳಿಂದ ಎಷ್ಟೊ ಜನರು ಅಪಾಯ ಎದುರಿಸಿದ್ದಾರೆ’ ಎಂದು ಆಟೋ ಮಾಲಿಕ ಶ್ರೀಕಾಂತ ಗುಂಡಮಿ, ಶರಣು ಬಿರಾದಾರ ತಿಳಿಸಿದ್ದಾರೆ.</p>.<p>ಇನ್ನು ಹಂದಿ– ನಾಯಿಗಳ ಹಾವಳಿಯಿಂದ ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರು, ವಿಕಲಚೇತನರು ಸುಲಭವಾಗಿ ತಿರುಗಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳಿಗೆ ತೀವ್ರ ಕಂಟಕವಾಗಿ ಸವಾರರು ನೋವು ಅನುಭವಿಸಿದ್ದಾರೆ. ಆದರೂ ಇವುಗಳ ನಿಯಂತ್ರಣ ಮಾತ್ರ ಶೂನ್ಯವಾಗಿದೆ.</p>.<p>ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶರಣಪ್ಪ ವನಮಾಲಿ, ಶಿವಲೀಲಾ ಅಷ್ಟಗಿ ಅನೇಕರು ಆಗ್ರಹಿಸಿದ್ದಾರೆ.</p>.<div><blockquote>ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದಾಗಿ ಸಿಬ್ಬಂದಿಗೆ ಬಿಡುವು ಸಿಗುತ್ತಿಲ್ಲ ನವೆಂಬರ್ ಎರಡನೇ ವಾರದವರೆಗೆ ಬಿಡಾಡಿ ದನ ಹಂದಿ ನಾಯಿಗಳ ನಿಯಂತ್ರಣ ಮಾಡಲಾಗುವುದು</blockquote><span class="attribution">ಪಂಕಜಾ ಎ. ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕಾಳಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಪಟ್ಟಣದ ಹಳೆ ಬಸ್ ನಿಲ್ದಾಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇನ್ನೊಂದಡೆ ಪಟ್ಟಣದಲ್ಲಿ ಹಂದಿ, ನಾಯಿಗಳ ಹಾವಳಿ ಮಿತಿಮೀರಿದೆ. </p>.<p>‘ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಹಾದುಹೋಗುವ ಇಲ್ಲಿ ನಿತ್ಯ ಒಂದಿಲ್ಲ ಒಂದು ಕಡೆಯಲ್ಲಿ ದನಗಳು ಓಡಾಡಿಕೊಂಡಿರುತ್ತವೆ. ಅದರಲ್ಲೂ ಹಳೆ ಬಸ್ ನಿಲ್ದಾಣದಲ್ಲಿ ಅವುಗಳ ಕಾಟ ವಿಪರೀತವಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.</p>.<p>ಪಟ್ಟಣ ಪಂಚಾಯಿತಿ ಸಿಬ್ಬಂದಿ ಧ್ವನಿವರ್ಧಕದ ಮೂಲಕ ರಸ್ತೆಗೆ ದನಗಳು ಬಿಡದಂತೆ ಕಾವಲು ಮಾಡಲು ಅನೇಕ ಸಲ ಜನರಿಗೆ ತಿಳಿಹೇಳಿದ್ದಾರೆ. ಆದರೆ ವಾರಸುದಾರರು ಅವುಗಳನ್ನು ಮನೆಗೆ ಕೊಂಡೊಯ್ಯುವಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಬಜಾರ್, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತವಲ್ಲದೇ ಹೆದ್ದಾರಿಯ ಎಲ್ಲೆಂದರಲ್ಲಿ ಹಗಲು-ರಾತ್ರಿ ಎನ್ನದೆ ಬಿಡಾಡಿ ದನಗಳು ಕಂಡುಬರುತ್ತಿವೆ.</p>.<p>‘ಬಿಡಾಡಿ ದನಗಳಿಂದ ಸಣ್ಣ ವಾಹನಗಳ ನಿಲುಗಡೆ ಮತ್ತು ಸಂಚಾರಕ್ಕೆ ಮಾರಕವಾಗಿ ಕಾಡುತ್ತಿವೆ. ಅವುಗಳಿಂದ ಎಷ್ಟೊ ಜನರು ಅಪಾಯ ಎದುರಿಸಿದ್ದಾರೆ’ ಎಂದು ಆಟೋ ಮಾಲಿಕ ಶ್ರೀಕಾಂತ ಗುಂಡಮಿ, ಶರಣು ಬಿರಾದಾರ ತಿಳಿಸಿದ್ದಾರೆ.</p>.<p>ಇನ್ನು ಹಂದಿ– ನಾಯಿಗಳ ಹಾವಳಿಯಿಂದ ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರು, ವಿಕಲಚೇತನರು ಸುಲಭವಾಗಿ ತಿರುಗಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳಿಗೆ ತೀವ್ರ ಕಂಟಕವಾಗಿ ಸವಾರರು ನೋವು ಅನುಭವಿಸಿದ್ದಾರೆ. ಆದರೂ ಇವುಗಳ ನಿಯಂತ್ರಣ ಮಾತ್ರ ಶೂನ್ಯವಾಗಿದೆ.</p>.<p>ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶರಣಪ್ಪ ವನಮಾಲಿ, ಶಿವಲೀಲಾ ಅಷ್ಟಗಿ ಅನೇಕರು ಆಗ್ರಹಿಸಿದ್ದಾರೆ.</p>.<div><blockquote>ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದಾಗಿ ಸಿಬ್ಬಂದಿಗೆ ಬಿಡುವು ಸಿಗುತ್ತಿಲ್ಲ ನವೆಂಬರ್ ಎರಡನೇ ವಾರದವರೆಗೆ ಬಿಡಾಡಿ ದನ ಹಂದಿ ನಾಯಿಗಳ ನಿಯಂತ್ರಣ ಮಾಡಲಾಗುವುದು</blockquote><span class="attribution">ಪಂಕಜಾ ಎ. ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕಾಳಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>