ಆಳಂದ: ತಾಲ್ಲೂಕಿನ ಸಾವಳೇಶ್ವರ ಗ್ರಾಮದ ವಿಶ್ವಸನ್ಮತಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಲಕ್ಷ್ಮಿಪುತ್ರ ಅಮೃತರಾವ ಮಾಡ್ಯಾಳೆ ಕಾಲಿನ ಬೆರಳುಗಳ ಸಹಾಯದಿಂದ ಪರೀಕ್ಷೆ ಬರೆದರು.
ವಿದ್ಯಾರ್ಥಿಯ ಎರಡೂ ಕೈಗಳು ಶಕ್ತಿ ಕಳೆದುಕೊಂಡು, ಮುಂಗೈವರೆಗೆ ಮಾತ್ರ ಬೆಳೆದಿವೆ. ಅಂಗೈ, ಬೆರಳುಗಳು ಇಲ್ಲದ ಲಕ್ಷ್ಮಿಪುತ್ರ ಯಾರ ನೆರವೂ ಪಡೆಯದೇ ತನ್ನ ಕಾಲು ಬೆರಳುಗಳಿಂದ ನೂತನ ಮಾದರಿಯ ಪರೀಕ್ಷೆ ಎದುರಿಸಿದ.
ಕಾಲ ಬೆರಳಿನಿಂದ ಪ್ರಶ್ನೆ ಪತ್ರಿಕೆಯ ಪುಟ ತಿರುವಿ, ಒಎಂಆರ್ ಶೀಟ್ನಲ್ಲಿ ಗುರುತು ಹಾಕಿದ್ದು ಕೇಂದ್ರಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ, ಸೇರಿದಂತೆ ಇತರ ಸಿಬ್ಬಂದಿಯ ಗಮನ ಸೆಳೆಯಿತು.
27 ಕೇಂದ್ರಗಳಲ್ಲಿ ಪರೀಕ್ಷೆ:ಬುಧವಾರ 27 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿಯ ಭಾಷಾ ವಿಷಯಗಳ ಪರೀಕ್ಷೆ ಏಕಕಾಲದಲ್ಲಿ ನಡೆದವು. ಮುಂಜಾನೆಯಿಂದ ಶುರುವಾದ ಜಿಟಿಜಿಟಿ ಮಳೆಯಲ್ಲೇ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಮಾಸ್ಕ್ ವಿತರಿಸಲಾಯಿತು.