ಕಠಿಣ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ನಾಶವನ್ನು ತಡೆಗಟ್ಟಿ. ಜೀವನೋಪಾಯ ಕಳೆದುಕೊಳ್ಳುವ ಬೀದಿಬದಿ ವ್ಯಾಪಾರಿಗಳು, ಅಟೊ–ಟ್ಯಾಕ್ಸಿ ಚಾಲಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆಗೆಲಸದವರು, ಸಣ್ಣ ವ್ಯಾಪಾರಿಗಳು, ಸ್ವಂತ ಕಸುಬು ನಡೆಸುವ ದೋಬಿಗಳು, ಕ್ಷೌರಿಕರು, ಚಮ್ಮಾರರು, ದರ್ಜಿಗಳು ಮೊದಲಾದವರೆಲ್ಲರಿಗೆ ಮಾಸಿಕ ₹ 7500 ಸಹಾಯಧನ ಒದಗಿಸಿ. ಬಡವರು ಹಸಿವೆಗೆ ಬಲಿಯಾಗದಂತೆ ತಡೆಯಲು ಪಡಿತರ ಮೂಲಕ ತಲಾ 10 ಕೆ.ಜಿ ಅಕ್ಕಿ, ಅಡುಗೆ ಎಣ್ಣೆ, ಬೇಳೆಕಾಳುಗಳು, ಸಕ್ಕರೆ ಮೊದಲಾದ ಅಗತ್ಯ ವಸ್ತುಗಳನ್ನು ಪೂರೈಸಬೇಕು. ಎಲ್ಲರಿಗೂ ಸಾರ್ವತ್ರಿಕವಾಗಿ ಉಚಿತ ಲಸಿಕೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.