<p><strong>ಕಲಬುರಗಿ:</strong> ‘ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ. ಆದರೆ, ಸಂಘ–ಸಂಸ್ಥೆಯವರು ಅನಾಥರನ್ನು ನಮ್ಮವರೆಂದು ಭಾವಿಸಿ ಸ್ವೀಕರಿಸುವುದು, ಪ್ರೀತಿ ನೀಡುವುದು ಬಹಳ ಮುಖ್ಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನಕುಮಾರ್ ಯು. ಹೇಳಿದರು.</p>.<p>ನಗರದ ಸಂಗಮೇಶ್ವರ ಕಾಲೊನಿಯ ಸರ್ಕಾರಿ ಮಹಿಳಾ ವಸತಿಗೃಹದಲ್ಲಿ ಭಾನುವಾರ ಸಂಗಮೇಶ್ವರ ಮಹಿಳಾ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅನಾಥ ಬಾಲಕಿಯರ ವಸತಿಗೃಹದ ಅಧೀಕ್ಷಕಿ ಅನುರಾಧಾ ಪಾಟೀಲ ಮಾತನಾಡಿ, ‘ಸಮಾಜದ ಸಂಘ–ಸಂಸ್ಥೆಗಳು ಸಹಕರಿಸಿದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೈಶಾಲಿ ದೇಶಮುಖ, ‘ಇಲ್ಲಿಯ ಮಕ್ಕಳು, ಮಹಿಳೆಯರು ಯಾರೂ ಅಪರಾಧಿಗಳಲ್ಲ. ಬದುಕಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು, ಭಾವನೆಗಳನ್ನು ಪಡೆಯುವ ಹಕ್ಕು ಇವರಿಗಿದೆ. ಸರ್ಕಾರ ಮತ್ತು ನಮ್ಮಂತಹ ಸಂಘ–ಸಂಸ್ಥೆಗಳು ಈ ಕೆಲಸವನ್ನು ಮಾಡಬೇಕಾಗಿದೆ. ಇದು ಸಮಾಜದ ಜವಾಬ್ದಾರಿಯೂ ಹೌದು’ ಎಂದು ಹೇಳಿದರು.</p>.<p>ಮಂಡಳದ ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್ ಮಾತನಾಡಿ, ‘ಮಹಿಳಾ ಮಂಡಳವು ಸುಮಾರು 45 ವರ್ಷಗಳಿಂದ ಮಹಿಳೆಯರ ಬದುಕು ಹಸನಾಗಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಬದುಕಿಗೆ ಮಾರ್ಗದರ್ಶನ ನೀಡಿ ಮುಖ್ಯವಾಹಿನಿಯಲ್ಲಿ ವಿದ್ಯಾಭ್ಯಾಸ ಪಡೆಯುವಂತೆ ಮಾಡಿದೆ’ ಎಂದರು.</p>.<p><strong>ಸ್ಪರ್ಧೆ:</strong></p><p>ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ನೃತ್ಯದಲ್ಲಿ ಯಶೋಧಾ ಹರಿಸಿಂಗ್(ಪ್ರಥಮ), ಪೂಜಾ ಎಸ್. (ದ್ವಿತೀಯ), ಕೌಶಲ್ಯಾ ಶರಣಪ್ಪ (ತೃತೀಯ) ಬಹುಮಾನ ಪಡೆದರು.</p>.<p>ರಂಗೋಲಿಯಲ್ಲಿ ನಿಖಿತಾ ವಿಷ್ಣುಕಾಂತ (ಪ್ರಥಮ), ತಿಪ್ಪಮ್ಮ ರಮೇಶ (ದ್ವಿತೀಯ), ರೇಖಾ ನಾಗಣ್ಣ (ತೃತೀಯ) ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು. ಕಾವ್ಯಶ್ರೀ ಹಾಗೂ ಸುನಿತಾ ನಿರ್ಣಾಯಕರಾಗಿದ್ದರು.</p>.<p>ಮಂಡಳದ ಸದಸ್ಯರಾದ ಸುಷ್ಮಾ ನವಣಿ, ನಿರ್ಮಲಾ ಪಾಟೀಲ, ಸುರೇಖಾ ರಾವ್, ಭಾರತಿ ಎಸ್. ಇದ್ದರು. ಶ್ರುತಿ ವಿ.ಸಾಗರ್ ಪ್ರಾರ್ಥಿಸಿದರು. ಶಾಂತರಾವ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸುತ್ತದೆ. ಆದರೆ, ಸಂಘ–ಸಂಸ್ಥೆಯವರು ಅನಾಥರನ್ನು ನಮ್ಮವರೆಂದು ಭಾವಿಸಿ ಸ್ವೀಕರಿಸುವುದು, ಪ್ರೀತಿ ನೀಡುವುದು ಬಹಳ ಮುಖ್ಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನವೀನಕುಮಾರ್ ಯು. ಹೇಳಿದರು.</p>.<p>ನಗರದ ಸಂಗಮೇಶ್ವರ ಕಾಲೊನಿಯ ಸರ್ಕಾರಿ ಮಹಿಳಾ ವಸತಿಗೃಹದಲ್ಲಿ ಭಾನುವಾರ ಸಂಗಮೇಶ್ವರ ಮಹಿಳಾ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅನಾಥ ಬಾಲಕಿಯರ ವಸತಿಗೃಹದ ಅಧೀಕ್ಷಕಿ ಅನುರಾಧಾ ಪಾಟೀಲ ಮಾತನಾಡಿ, ‘ಸಮಾಜದ ಸಂಘ–ಸಂಸ್ಥೆಗಳು ಸಹಕರಿಸಿದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಸಂಗಮೇಶ್ವರ ಮಹಿಳಾ ಮಂಡಳ ಅಧ್ಯಕ್ಷೆ ವೈಶಾಲಿ ದೇಶಮುಖ, ‘ಇಲ್ಲಿಯ ಮಕ್ಕಳು, ಮಹಿಳೆಯರು ಯಾರೂ ಅಪರಾಧಿಗಳಲ್ಲ. ಬದುಕಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು, ಭಾವನೆಗಳನ್ನು ಪಡೆಯುವ ಹಕ್ಕು ಇವರಿಗಿದೆ. ಸರ್ಕಾರ ಮತ್ತು ನಮ್ಮಂತಹ ಸಂಘ–ಸಂಸ್ಥೆಗಳು ಈ ಕೆಲಸವನ್ನು ಮಾಡಬೇಕಾಗಿದೆ. ಇದು ಸಮಾಜದ ಜವಾಬ್ದಾರಿಯೂ ಹೌದು’ ಎಂದು ಹೇಳಿದರು.</p>.<p>ಮಂಡಳದ ಕಾರ್ಯದರ್ಶಿ ಸಂಧ್ಯಾ ಹೊನಗುಂಟಿಕರ್ ಮಾತನಾಡಿ, ‘ಮಹಿಳಾ ಮಂಡಳವು ಸುಮಾರು 45 ವರ್ಷಗಳಿಂದ ಮಹಿಳೆಯರ ಬದುಕು ಹಸನಾಗಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಬದುಕಿಗೆ ಮಾರ್ಗದರ್ಶನ ನೀಡಿ ಮುಖ್ಯವಾಹಿನಿಯಲ್ಲಿ ವಿದ್ಯಾಭ್ಯಾಸ ಪಡೆಯುವಂತೆ ಮಾಡಿದೆ’ ಎಂದರು.</p>.<p><strong>ಸ್ಪರ್ಧೆ:</strong></p><p>ಮಹಿಳೆಯರಿಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ನೃತ್ಯದಲ್ಲಿ ಯಶೋಧಾ ಹರಿಸಿಂಗ್(ಪ್ರಥಮ), ಪೂಜಾ ಎಸ್. (ದ್ವಿತೀಯ), ಕೌಶಲ್ಯಾ ಶರಣಪ್ಪ (ತೃತೀಯ) ಬಹುಮಾನ ಪಡೆದರು.</p>.<p>ರಂಗೋಲಿಯಲ್ಲಿ ನಿಖಿತಾ ವಿಷ್ಣುಕಾಂತ (ಪ್ರಥಮ), ತಿಪ್ಪಮ್ಮ ರಮೇಶ (ದ್ವಿತೀಯ), ರೇಖಾ ನಾಗಣ್ಣ (ತೃತೀಯ) ಬಹುಮಾನ ಪಡೆದರು. ಭಾಗವಹಿಸಿದ ಎಲ್ಲ ಮಹಿಳೆಯರಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು. ಕಾವ್ಯಶ್ರೀ ಹಾಗೂ ಸುನಿತಾ ನಿರ್ಣಾಯಕರಾಗಿದ್ದರು.</p>.<p>ಮಂಡಳದ ಸದಸ್ಯರಾದ ಸುಷ್ಮಾ ನವಣಿ, ನಿರ್ಮಲಾ ಪಾಟೀಲ, ಸುರೇಖಾ ರಾವ್, ಭಾರತಿ ಎಸ್. ಇದ್ದರು. ಶ್ರುತಿ ವಿ.ಸಾಗರ್ ಪ್ರಾರ್ಥಿಸಿದರು. ಶಾಂತರಾವ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>