ಸಂಸ್ಥೆಯ ಮಾಜಿ ಅಧ್ಯಕ್ಷ ಅಬ್ದುಲ್ ಸತ್ತಾರ್ ಸಾಬ್ ಗಿರಣಿ ಅವರು ವಿನಾಕಾರಣ ಕಚೇರಿಗೆ ಕರೆಸಿ ಅಶ್ಲೀಲವಾಗಿ ಮಾತನಾಡುವುದು, ಅನಗತ್ಯ ಸ್ಪರ್ಶಿಸುವುದು, ಪೆಟ್ರೋಲ್ ಬಂಕ್ ಕಚೇರಿಯಲ್ಲಿ ಭೇಟಿ ಆಗುವಂತೆ ಹೇಳುತ್ತಿದ್ದರು. ಇದಕ್ಕೆ ಸಹಕರಿಸುವಂತೆ ಮುಖ್ಯಶಿಕ್ಷಕ ರೋಷನ್ ಜಮೀರ್ ಒತ್ತಡ ಹಾಕುತ್ತಿದ್ದರು. ಇಲ್ಲದಿದ್ದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತ ಶಿಕ್ಷಕಿ ಅಳಲು ತೋಡಿಕೊಂಡರು.