<figcaption>""</figcaption>.<p><strong>ಕಲಬುರ್ಗಿ: </strong>ಬಡ, ನಿರುದ್ಯೋಗಿಗಳಿಗೆ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ‘ಪ್ರವಾಸಿ ಟ್ಯಾಕ್ಸಿ’ ಯೋಜನೆಯಡಿ ಕಾರು ಖರೀದಿಸಲು ₹ 3 ಲಕ್ಷ ಸಹಾಯಧನ ನೀಡುವ ಯೋಜನೆ ರೂಪಿಸಿದೆ. ಆದರೆ, ಕೋವಿಡ್ ಕಾರಣಕ್ಕಾಗಿ ಜಿಲ್ಲೆಗೆ ಇನ್ನೂವರೆಗೂ ಪ್ರಸಕ್ತ ಸಾಲಿನ ಟ್ಯಾಕ್ಸಿಗಳಿಗೆ ಸಹಾಯಧನ ನೀಡಲು ರಾಜ್ಯ ಸರ್ಕಾರದಿಂದ ಸೂಚನೆ ಬಂದಿಲ್ಲ. ಇದು ಟ್ಯಾಕ್ಸಿ ಆಕಾಂಕ್ಷಿ ಯುವಕರ ಆತಂಕಕ್ಕೆ ಕಾರಣವಾಗಿದೆ.</p>.<p>‘ಜಿಲ್ಲೆಯ ಸನ್ನತಿ, ನಾಗಾವಿ, ಮಳಖೇಡ, ಪರಿಸರ ವೈವಿಧ್ಯ ತಾಣವಾದ ಚಿಂಚೋಳಿ ತಾಲ್ಲೂಕಿನ ಹಲವೆಡೆ ಪ್ರವಾಸಿಗಳನ್ನು ಕರೆದೊಯ್ಯಲು ಪ್ರವಾಸಿ ಟ್ಯಾಕ್ಸಿಗಳನ್ನು ಬಳಸಿಕೊಳ್ಳಬಹುದಾಗಿದೆ. ಇಲಾಖೆಯ ಸಹಾಯಧನ ಪಡೆಯುವುದರ ಜೊತೆಗೆ ತಾವು ಕೂಡಿಟ್ಟ ಹಣದಲ್ಲಿ ಕಾರನ್ನು ಖರೀದಿಸುವುದರಿಂದ ಕುಟುಂಬವನ್ನು ಸಲುಹಬಹುದಾಗಿತ್ತು’ ಎಂದು ಅವರು ಹೇಳುತ್ತಿದ್ದಾರೆ.</p>.<p>ಮೇ ತಿಂಗಳಲ್ಲಿ ಜಿಲ್ಲೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಮಾರ್ಚ್ನಿಂದಲೇ ಕೊರೊನಾ ಆರಂಭವಾಗಿದೆ. ಕೊರೊನಾ ಕಾರಣದಿಂದಾಗಿ ಇಲಾಖೆಗೆ ಹಣಕಾಸು ಲಭ್ಯತೆಯೂ ಕಡಿಮೆಯಾಗಿದೆ. ಹೀಗಾಗಿ, ಈ ಬಾರಿ ಅರ್ಜಿ<br />ಆಹ್ವಾನಿಸುವ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಇಲಾಖೆಯ ಮೂಲಗಳು.</p>.<p>ಇಲಾಖೆಯು ಪ್ರತಿ ವರ್ಷ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ 10, ಪರಿಶಿಷ್ಟ ಪಂಗಡಕ್ಕೆ ಸೇರಿದ 3 ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಸೇರಿದವರಿಗೆ 12 ಸೇರಿದಂತೆ 25 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಲಾ ₹ 3 ಲಕ್ಷ ಸಹಾಯಧನ ವನ್ನು ನೀಡುತ್ತಿತ್ತು. ಕಳೆದ ವರ್ಷದ ಸಹಾಧಯನ ಪಡೆದ ಫಲಾನುಭವಿಯೊಬ್ಬರಿಗೆ ಇತ್ತೀಚೆಗೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರು ಕಾರಿನ ಕೀಲಿಯನ್ನು ಹಸ್ತಾಂತರಿಸಿದರು.</p>.<p class="Subhead">ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೂ ನೆರವಿಲ್ಲ: ಪರಿಶಿಷ್ಟರ ಅಭ್ಯುದಯಕ್ಕಾಗಿ ಅಸ್ತಿತ್ವಕ್ಕೆ ಬಂದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೂ ಕಾರು ಖರೀದಿಗೆ ₹ 5 ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ. 2018–19ನೇ ಸಾಲಿನಿಂದ ಅರ್ಜಿ ಸಲ್ಲಿಸಿದವರಿಗೂ ಇನ್ನೂ ಹಣ ಮಂಜೂರಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.</p>.<p>‘ನಿಗಮದ ₹ 5 ಲಕ್ಷ ಪಾಲು ಹೊರತುಪಡಿಸಿದರೂ ಒಂದು ಉತ್ತಮ ಗುಣಮಟ್ಟದ ಪ್ರವಾಸಿ ಟ್ಯಾಕ್ಸಿಯನ್ನು ಖರೀದಿಸಲು ₹ 8ರಿಂದ ₹ 10 ಲಕ್ಷ ಬೇಕಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್ ಸಾಲದ ಮೂಲಕ ಭರಿಸಬೇಕು. ಆದರೆ, ಬ್ಯಾಂಕುಗಳು ಕೊರೊನಾ ನೆಪವೊಡ್ಡಿ ಸಾಲವನ್ನೇ ಮಂಜೂರು ಮಾಡುತ್ತಿಲ್ಲ’ ಎಂದು ಆರೋಪಿಸುತ್ತಾರೆ ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ಕಲಬುರ್ಗಿ ಜಿಲ್ಲಾಘಟಕದ ಅಧ್ಯಕ್ಷ ರುಕ್ಮಣ್ಣ ಎ. ರೆಡ್ಡಿ.</p>.<p><strong>ಅಂಕಿ ಅಂಶಗಳು</strong></p>.<p>₹ 15.75 ಕೋಟಿ - ಕಳೆದ ವರ್ಷ ಯೋಜನೆಗೆ ಮೀಸಲಿಟ್ಟಿದ್ದ ಸಹಾಯಧನ</p>.<p>************</p>.<figcaption><strong>ಶಶಿಧರ ತಳಕೇರಿ</strong></figcaption>.<p>ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಈ ಬಾರಿ ಅರ್ಜಿ ಆಹ್ವಾನಿಸಬಹುದೇ ಎಂದು ಕಾಯುತ್ತಿದ್ದೆ. ಆ ನಿರೀಕ್ಷೆಯೂ ಹುಸಿಯಾಗಿದೆ. ಇಲಾಖೆಗೆ ಹಂಚಿಕೆಯಾದ ಅನುದಾನದಲ್ಲೇ ಈ ಯೋಜನೆ ಮುಂದುವರಿಸಬೇಕು<br /><strong>ಶಶಿಧರ ತಳಕೇರಿ, ಬಬಲಾದ (ಎಸ್), ಕಲಬುರ್ಗಿ</strong></p>.<p><b>********</b></p>.<figcaption><strong>ಪ್ರಭುಲಿಂಗ ಎಸ್. ತಳಕೇರಿ</strong></figcaption>.<p>ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರದಿಂದ ನಮಗೆ ಇನ್ನೂ ಸೂಚನೆ ಬಂದಿಲ್ಲ. ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ<br />-<strong>ಪ್ರಭುಲಿಂಗ ಎಸ್. ತಳಕೇರಿ</strong><br />ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಕಲಬುರ್ಗಿ: </strong>ಬಡ, ನಿರುದ್ಯೋಗಿಗಳಿಗೆ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷ ‘ಪ್ರವಾಸಿ ಟ್ಯಾಕ್ಸಿ’ ಯೋಜನೆಯಡಿ ಕಾರು ಖರೀದಿಸಲು ₹ 3 ಲಕ್ಷ ಸಹಾಯಧನ ನೀಡುವ ಯೋಜನೆ ರೂಪಿಸಿದೆ. ಆದರೆ, ಕೋವಿಡ್ ಕಾರಣಕ್ಕಾಗಿ ಜಿಲ್ಲೆಗೆ ಇನ್ನೂವರೆಗೂ ಪ್ರಸಕ್ತ ಸಾಲಿನ ಟ್ಯಾಕ್ಸಿಗಳಿಗೆ ಸಹಾಯಧನ ನೀಡಲು ರಾಜ್ಯ ಸರ್ಕಾರದಿಂದ ಸೂಚನೆ ಬಂದಿಲ್ಲ. ಇದು ಟ್ಯಾಕ್ಸಿ ಆಕಾಂಕ್ಷಿ ಯುವಕರ ಆತಂಕಕ್ಕೆ ಕಾರಣವಾಗಿದೆ.</p>.<p>‘ಜಿಲ್ಲೆಯ ಸನ್ನತಿ, ನಾಗಾವಿ, ಮಳಖೇಡ, ಪರಿಸರ ವೈವಿಧ್ಯ ತಾಣವಾದ ಚಿಂಚೋಳಿ ತಾಲ್ಲೂಕಿನ ಹಲವೆಡೆ ಪ್ರವಾಸಿಗಳನ್ನು ಕರೆದೊಯ್ಯಲು ಪ್ರವಾಸಿ ಟ್ಯಾಕ್ಸಿಗಳನ್ನು ಬಳಸಿಕೊಳ್ಳಬಹುದಾಗಿದೆ. ಇಲಾಖೆಯ ಸಹಾಯಧನ ಪಡೆಯುವುದರ ಜೊತೆಗೆ ತಾವು ಕೂಡಿಟ್ಟ ಹಣದಲ್ಲಿ ಕಾರನ್ನು ಖರೀದಿಸುವುದರಿಂದ ಕುಟುಂಬವನ್ನು ಸಲುಹಬಹುದಾಗಿತ್ತು’ ಎಂದು ಅವರು ಹೇಳುತ್ತಿದ್ದಾರೆ.</p>.<p>ಮೇ ತಿಂಗಳಲ್ಲಿ ಜಿಲ್ಲೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಮಾರ್ಚ್ನಿಂದಲೇ ಕೊರೊನಾ ಆರಂಭವಾಗಿದೆ. ಕೊರೊನಾ ಕಾರಣದಿಂದಾಗಿ ಇಲಾಖೆಗೆ ಹಣಕಾಸು ಲಭ್ಯತೆಯೂ ಕಡಿಮೆಯಾಗಿದೆ. ಹೀಗಾಗಿ, ಈ ಬಾರಿ ಅರ್ಜಿ<br />ಆಹ್ವಾನಿಸುವ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಇಲಾಖೆಯ ಮೂಲಗಳು.</p>.<p>ಇಲಾಖೆಯು ಪ್ರತಿ ವರ್ಷ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ 10, ಪರಿಶಿಷ್ಟ ಪಂಗಡಕ್ಕೆ ಸೇರಿದ 3 ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಸೇರಿದವರಿಗೆ 12 ಸೇರಿದಂತೆ 25 ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಲಾ ₹ 3 ಲಕ್ಷ ಸಹಾಯಧನ ವನ್ನು ನೀಡುತ್ತಿತ್ತು. ಕಳೆದ ವರ್ಷದ ಸಹಾಧಯನ ಪಡೆದ ಫಲಾನುಭವಿಯೊಬ್ಬರಿಗೆ ಇತ್ತೀಚೆಗೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ ಅವರು ಕಾರಿನ ಕೀಲಿಯನ್ನು ಹಸ್ತಾಂತರಿಸಿದರು.</p>.<p class="Subhead">ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೂ ನೆರವಿಲ್ಲ: ಪರಿಶಿಷ್ಟರ ಅಭ್ಯುದಯಕ್ಕಾಗಿ ಅಸ್ತಿತ್ವಕ್ಕೆ ಬಂದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೂ ಕಾರು ಖರೀದಿಗೆ ₹ 5 ಲಕ್ಷ ಸಹಾಯಧನವನ್ನು ನೀಡಲಾಗುತ್ತಿದೆ. 2018–19ನೇ ಸಾಲಿನಿಂದ ಅರ್ಜಿ ಸಲ್ಲಿಸಿದವರಿಗೂ ಇನ್ನೂ ಹಣ ಮಂಜೂರಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.</p>.<p>‘ನಿಗಮದ ₹ 5 ಲಕ್ಷ ಪಾಲು ಹೊರತುಪಡಿಸಿದರೂ ಒಂದು ಉತ್ತಮ ಗುಣಮಟ್ಟದ ಪ್ರವಾಸಿ ಟ್ಯಾಕ್ಸಿಯನ್ನು ಖರೀದಿಸಲು ₹ 8ರಿಂದ ₹ 10 ಲಕ್ಷ ಬೇಕಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್ ಸಾಲದ ಮೂಲಕ ಭರಿಸಬೇಕು. ಆದರೆ, ಬ್ಯಾಂಕುಗಳು ಕೊರೊನಾ ನೆಪವೊಡ್ಡಿ ಸಾಲವನ್ನೇ ಮಂಜೂರು ಮಾಡುತ್ತಿಲ್ಲ’ ಎಂದು ಆರೋಪಿಸುತ್ತಾರೆ ಕರ್ನಾಟಕ ರಾಜ್ಯ ಖಾಸಗಿ ಟ್ಯಾಕ್ಸಿ ವಾಹನ ಚಾಲಕರ ಸಂಘದ ಕಲಬುರ್ಗಿ ಜಿಲ್ಲಾಘಟಕದ ಅಧ್ಯಕ್ಷ ರುಕ್ಮಣ್ಣ ಎ. ರೆಡ್ಡಿ.</p>.<p><strong>ಅಂಕಿ ಅಂಶಗಳು</strong></p>.<p>₹ 15.75 ಕೋಟಿ - ಕಳೆದ ವರ್ಷ ಯೋಜನೆಗೆ ಮೀಸಲಿಟ್ಟಿದ್ದ ಸಹಾಯಧನ</p>.<p>************</p>.<figcaption><strong>ಶಶಿಧರ ತಳಕೇರಿ</strong></figcaption>.<p>ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಈ ಬಾರಿ ಅರ್ಜಿ ಆಹ್ವಾನಿಸಬಹುದೇ ಎಂದು ಕಾಯುತ್ತಿದ್ದೆ. ಆ ನಿರೀಕ್ಷೆಯೂ ಹುಸಿಯಾಗಿದೆ. ಇಲಾಖೆಗೆ ಹಂಚಿಕೆಯಾದ ಅನುದಾನದಲ್ಲೇ ಈ ಯೋಜನೆ ಮುಂದುವರಿಸಬೇಕು<br /><strong>ಶಶಿಧರ ತಳಕೇರಿ, ಬಬಲಾದ (ಎಸ್), ಕಲಬುರ್ಗಿ</strong></p>.<p><b>********</b></p>.<figcaption><strong>ಪ್ರಭುಲಿಂಗ ಎಸ್. ತಳಕೇರಿ</strong></figcaption>.<p>ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರದಿಂದ ನಮಗೆ ಇನ್ನೂ ಸೂಚನೆ ಬಂದಿಲ್ಲ. ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ<br />-<strong>ಪ್ರಭುಲಿಂಗ ಎಸ್. ತಳಕೇರಿ</strong><br />ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>