<p>ಚಿಂಚೋಳಿ: ಮಳೆಯಿಂದಾಗಿ ಚಂದ್ರಂಪಳ್ಳಿ ಜಲಾಶಯದ ಸುತ್ತಮುತ್ತ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ. ಶನಿವಾರ ನೂರಾರು ಪ್ರವಾಸಿಗರು ಬಂದಿದ್ದರು.</p>.<p>ಮಳೆಯಿಂದ ಒಂದೇ ದಿನ ಹತ್ತಾರು ಅಡಿ ನೀರು ಹರಿದು ಬಂದಿದ್ದರಿಂದ ಜಲಾಶಯದ ನೀರು ಬಂಗಾರದ ಬಣ್ಣದೊಂದಿಗೆ ಹೊಳೆಯುತ್ತಿದೆ. ಸುತ್ತಲೂ ಹಸಿರು ಕಾಡು, ತೊಟಗಾರಿಕಾ ಕ್ಷೇತ್ರದಲ್ಲಿ ಗಿಡ ಮರಗಳ ಪೊದೆಯಲ್ಲಿ ನವಿಲುಗಳು ಕೂಗುತ್ತ ನರ್ತಿಸುತ್ತಿದ್ದವು.</p>.<p>ತಂಪಾದ ಗಾಳಿ, ಪಕ್ಷಿಗಳ ಕಲರವ ಜನರ ಓಡಾಟದಿಂದ ಪ್ರವಾಸಿ ತಾಣಕ್ಕೆ ಮೆರಗು ಬಂದಿತ್ತು. ಬಂಡ್ನಿಂದ ಉತ್ತರ ದಿಕ್ಕಿಗೆ ಕಣ್ಣು ಹಾಯಿಸಿದರೆ ಹಚ್ಚ ಹಸಿರು ಗುಡ್ಡದ ಮೇಲೆ ಗೊಟ್ಟಮಗೊಟ್ಟದ ಬಕ್ಕಪ್ರಭುಗಳ ದೇವಾಲಯ ಕಣ್ಮನ ಸೆಳೆಯುತ್ತಿದೆ.</p>.<p>ಜಲಾಶಯದ ಬಂಡ್ ಮೇಲೆ, ಗೇಟ್ ಹಾಗೂ ದಂಡೆ ಮತ್ತು ವನ್ಯಜೀವಿ ಧಾಮದ ಕಾಟೇಜ್ ಬಳಿ ವಿಹರಿಸಿ ಅಲ್ಲಿಂದ್ ಗೇಟ್ವರೆಗೆ ಹಾಗೂ ಮೇಲ್ಭಾಗದ ರೈತ ತರಬೇತಿ ಭವನದ ಬೆಟ್ಟ ಹಾಗೂ ಹನುಮಾನ ಮಂದಿರದ ಬಳಿ ವಿರಮಿಸಿ ಮನೆಗಳಿಗೆ ಮರಳಿದರು.</p>.<p>‘ಲಾಕಡೌನ್ನಿಂದಾಗಿ ಕುಟುಂಬ ಸಮೇತ ಮನೆಗಳಿಮದ ಹೊರಗೆ ಬಂದಿರಲಿಲ್ಲ. ಇದರಿಂದ ಶನಿವಾರ ನಾನು ಹಾಗೂ ನನ್ನ ಅಣ್ಣ ಪರಿವಾರದೊಂದಿಗೆ ಬಂದಿದ್ದೇವೆ’ ಎಂದು ಚಿಂಚೋಳಿಯ ಸುರೇಶ ಹುಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಐನೋಳ್ಳಿಯಿಂದ ಚಂದ್ರಂಪಳ್ಳಿಗೆ ಬರುವ ರಸ್ತೆ ಹಾಳಾಗಿದ್ದು, ಕೊಳ್ಳೂರು ಕ್ರಾಸ್ನಿಂದ ಇಲ್ಲಿಗೆ ಬರಲು ಉತ್ತಮ ರಸ್ತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ಮಳೆಯಿಂದಾಗಿ ಚಂದ್ರಂಪಳ್ಳಿ ಜಲಾಶಯದ ಸುತ್ತಮುತ್ತ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ. ಶನಿವಾರ ನೂರಾರು ಪ್ರವಾಸಿಗರು ಬಂದಿದ್ದರು.</p>.<p>ಮಳೆಯಿಂದ ಒಂದೇ ದಿನ ಹತ್ತಾರು ಅಡಿ ನೀರು ಹರಿದು ಬಂದಿದ್ದರಿಂದ ಜಲಾಶಯದ ನೀರು ಬಂಗಾರದ ಬಣ್ಣದೊಂದಿಗೆ ಹೊಳೆಯುತ್ತಿದೆ. ಸುತ್ತಲೂ ಹಸಿರು ಕಾಡು, ತೊಟಗಾರಿಕಾ ಕ್ಷೇತ್ರದಲ್ಲಿ ಗಿಡ ಮರಗಳ ಪೊದೆಯಲ್ಲಿ ನವಿಲುಗಳು ಕೂಗುತ್ತ ನರ್ತಿಸುತ್ತಿದ್ದವು.</p>.<p>ತಂಪಾದ ಗಾಳಿ, ಪಕ್ಷಿಗಳ ಕಲರವ ಜನರ ಓಡಾಟದಿಂದ ಪ್ರವಾಸಿ ತಾಣಕ್ಕೆ ಮೆರಗು ಬಂದಿತ್ತು. ಬಂಡ್ನಿಂದ ಉತ್ತರ ದಿಕ್ಕಿಗೆ ಕಣ್ಣು ಹಾಯಿಸಿದರೆ ಹಚ್ಚ ಹಸಿರು ಗುಡ್ಡದ ಮೇಲೆ ಗೊಟ್ಟಮಗೊಟ್ಟದ ಬಕ್ಕಪ್ರಭುಗಳ ದೇವಾಲಯ ಕಣ್ಮನ ಸೆಳೆಯುತ್ತಿದೆ.</p>.<p>ಜಲಾಶಯದ ಬಂಡ್ ಮೇಲೆ, ಗೇಟ್ ಹಾಗೂ ದಂಡೆ ಮತ್ತು ವನ್ಯಜೀವಿ ಧಾಮದ ಕಾಟೇಜ್ ಬಳಿ ವಿಹರಿಸಿ ಅಲ್ಲಿಂದ್ ಗೇಟ್ವರೆಗೆ ಹಾಗೂ ಮೇಲ್ಭಾಗದ ರೈತ ತರಬೇತಿ ಭವನದ ಬೆಟ್ಟ ಹಾಗೂ ಹನುಮಾನ ಮಂದಿರದ ಬಳಿ ವಿರಮಿಸಿ ಮನೆಗಳಿಗೆ ಮರಳಿದರು.</p>.<p>‘ಲಾಕಡೌನ್ನಿಂದಾಗಿ ಕುಟುಂಬ ಸಮೇತ ಮನೆಗಳಿಮದ ಹೊರಗೆ ಬಂದಿರಲಿಲ್ಲ. ಇದರಿಂದ ಶನಿವಾರ ನಾನು ಹಾಗೂ ನನ್ನ ಅಣ್ಣ ಪರಿವಾರದೊಂದಿಗೆ ಬಂದಿದ್ದೇವೆ’ ಎಂದು ಚಿಂಚೋಳಿಯ ಸುರೇಶ ಹುಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಐನೋಳ್ಳಿಯಿಂದ ಚಂದ್ರಂಪಳ್ಳಿಗೆ ಬರುವ ರಸ್ತೆ ಹಾಳಾಗಿದ್ದು, ಕೊಳ್ಳೂರು ಕ್ರಾಸ್ನಿಂದ ಇಲ್ಲಿಗೆ ಬರಲು ಉತ್ತಮ ರಸ್ತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>