ಕಲಬುರಗಿ: ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಕಳವು ಪ್ರಕರಣ ಭೇದಿಸಿದ ಪೊಲೀಸ್ ಸಿಬ್ಬಂದಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಿಲತ್ ನಗರದ ನಿವಾಸಿ ತಾಹಿರಾ ಬೇಗಂ ಆಯುಬ್ ಖಾನ್(46) ಮತ್ತು ಪರ್ವೀನ್ ಬೇಗಂ(29) ಬಂಧಿತ ಆರೋಪಿಗಳು. ಅವರಿಂದ ₹3 ಲಕ್ಷ ವೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಹ್ಮಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಚಿನ್ ಚಲವಾದಿ ನೇತೃತ್ವದಲ್ಲಿ ಸಿಬ್ಬಂದಿ ಸವಿತಾ, ಜ್ಯೋತಿ, ತಾತ್ವಿಕಾ ಪಾಟೀಲ, ಶಿವಪ್ರಕಾಶ, ಸಂತೋಷ, ಕಲ್ಯಾಣ ಕುಮಾರ, ರಾಮು ಪವಾರ ತನಿಖಾ ತಂಡದಲ್ಲಿ ಇದ್ದರು.