’ಕೆಲ ಖಾಸಗಿ ಶಾಲೆಗಳು ಆನ್ಲೈನ್ ಮೂಲಕ ಪಾಠ ಆರಂಭಿಸಿದವು. ಆದರೆ ಗ್ರಾಮೀಣ ಭಾಗದ ಪಾಲಕರಲ್ಲಿ ಮೊಬೈಲ್ ಇರುವುದಿಲ್ಲ. ಮೊಬೈಲ್ ಇದ್ದರೂ ಸಹ ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಓದಿನಿಂದ ದೂರ ಉಳಿಯುವಂತಾಗಿತ್ತು. ಜೊತೆಗೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಇರುವ ಸಂಬಂಧ ಕೂಡ ವಿರಳವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ವಠಾರ ಕೇಂದ್ರ ತಡೆಯೊಡ್ಡಿದೆ’ ಎನ್ನುತ್ತಾರೆ ಕೋಡ್ಲಾ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ಶರಣಬಸಪ್ಪ ಬೆನಕನಹಳ್ಳಿ.