‘1947ರಲ್ಲಿ ಭಾರವು ಅಹಿಂಸೆಯಿಂದಲೇ ಸ್ವಾತಂತ್ರ್ಯ ಗಳಿಸಿತು. ಆದರೆ, ಮರು ವರ್ಷವೇ (1948) ನಡೆದ ಹೈದರಾಬಾದ್ ವಿಮೋಚನಾ ಹೋರಾಟಕ್ಕೆ ಶಸ್ತ್ರಾಸ್ತ್ರ ಬಳಸಿ ಯುದ್ಧ ಮಾಡಿ, ರಕ್ತ ಹರಿಸುವ ಸ್ಥಿತಿಗೆ ದೇಶ ಬಂದುಬಿಟ್ಟಿತ್ತು. ಈ ಹೋರಾಟದಲ್ಲಿ ಗುಲಾಮಗಿರಿಯ ವಿರುದ್ಧ ನಿಲ್ಲುವ ಜತೆಜತೆಗೇ ಧರ್ಮ ಸಂಘರ್ಷದ ವಿರುದ್ಧವೂ ಹೋಗಬೇಕಾದ ಅನಿವಾರ್ಯ ಬಂತು. ಹೀಗಾಗಿ, ಜಗತ್ತಿನ ಎಲ್ಲ ಹೋರಾಟಗಳಲ್ಲೂ ಇದು ವಿಶೇಷವಾಗಿ ಕಾಣಿಸುತ್ತದೆ’ ಎಂದು ವಿವರಿಸಿದರು.