<p><strong>ವಾಡಿ: ‘</strong>ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಭಕ್ತರೇ ಅಸ್ತಿ. ತನುಮನದ ಭಕ್ತಿ ಸಮರ್ಪಿಸಿದ ಭಕ್ತರಿಗೆ ಸಿದ್ದಿಪ್ರಾಪ್ತಿ ಸಿಗಲಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ತೋಟೇಂದ್ರ ಶ್ರೀಗಳ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾಗಿದ್ದೇನೆ’ ಎಂದು ಶಾಸಕ ಬಸವರಾಜ ಮತ್ತಿಮೂಡು ಹೇಳಿದರು.</p>.<p>ನಾಲವಾರದ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ, ಮಾಸಿಕ ಶಿವಾನುಭವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸಕನಾಗಿ ಕೆಲಸ ಮಾಡಲು ಶ್ರೀಗಳ ಮತ್ತು ನನ್ನ ಭಾಗದ ಜನರ ಆಶೀರ್ವಾದ ಕಾರಣ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಸಿದ್ದ ತೋಟೆಂದ್ರ ಶಿವಾಚಾರ್ಯ ಮಾತನಾಡಿ, ‘ಮಠದ ಆವರಣದಲ್ಲಿ 11 ದಿನ ನಡೆದ ಕಡಕೋಳ ಮಡಿವಾಳೇಶ್ವರ ಪ್ರವಚನ, ಭಕ್ತರ ಮನಸ್ಸು ಪರಿವರ್ತನೆ ಮಾಡಿದೆ. ಶರಣರ ಚಿಂತನೆ, ಜೀವನ, ಎದುರಿಸಿದ ಸಮಸ್ಯೆ ಮತ್ತು ಸವಾಲುಗಳು ನಮಗೆ ಆದರ್ಶವಾಗಬೇಕು’ ಎಂದರು.</p>.<p>‘ಶರಣ ಮಡಿವಾಳಪ್ಪನವರು ಅನುಭವಿಸಿದ ಕಷ್ಟ ನೋವು ಅವರ ವಚನಗಳಾಗಿ, ಹಾಡುಗಳಾಗಿ ಹೊರ ಬಂದಿವೆ. ಇಂದಿಗೂ ಪ್ರತಿ ಪ್ರವಚನಕಾರರಿಗೆ ಕಡಕೋಳ ಮಡಿವಾಳೇಶ್ವರರ ವಚನಗಳು ಅಗ್ರಗಣ್ಯ. ಶ್ರೀಮಠದಲ್ಲಿ ನಡೆಯುವ ಭಕ್ತರ ಹರಕೆಯ ತನಾರತಿ ಮಹೋತ್ಸವಕ್ಕೆ ಸೇರುವ ಭಕ್ತರಿಂದ ಇಂದಿಗೂ ಜೀವಂತ ಪವಾಡವಾಗಿದೆ’ ಎಂದರು.</p>.<p>ತನಾರತಿಯಲ್ಲಿ ತಲೆ ಎತ್ತಿ ನಿಲ್ಲುವ ಬತ್ತಿ, ತಾನು ಸುಟ್ಟು ಬೆಳಕನ್ನು ನೀಡುವದಕ್ಕೆ ದ್ಯೋತಕವಾಗಿದೆ. ನಮ್ಮ ಬದುಕು ದೀಪದಲ್ಲಿರುವ ಬತ್ತಿಯಾಗಬೇಕು’ ಎಂದು ಹೇಳಿದರು.</p>.<p>ಹನ್ನೊಂದು ದಿನ ಜರುಗಿದ ಕಡಕೋಳ ಮಡಿವಾಳೇಶ್ವರರ ಪ್ರವಚನವನ್ನು ಸಿದ್ದ ಬಸವ ಕಬೀರ ಸ್ವಾಮಿಗಳು ಮಂಗಳಗೊಳಿಸಿದರು. ತೋಟೆಂದ್ರ ಬೆಂಗಳೂರ, ಮಹೇಶ ಸ್ವಾಮಿ ಚಿಂಚೋಳಿ, ನಾಗೇಶ ಪಾಟೀಲ ಧರ್ಮಾಪೂರ, ಮಹಾದೇವ ಗಂವಾರ ಇದ್ದರು.</p>.<p>ಶರಣಕುಮಾರ ಜಾಲಹಳ್ಳಿ, ಕಾಶೀನಾಥ ಮಳಗ, ಸಿದ್ದ ಔರಾದಿ ಪ್ರಾರ್ಥಿಸಿದರು, ಸಿದ್ದರಾಜ ಕರೆಡ್ಡಿ ಸ್ವಾಗತಿಸಿದರು, ಪ್ರತೀಕ್ಷಾ ಗಾರಂಪಳ್ಳಿ, ನಿಶಾ ಪಡಶೆಟ್ಟಿ ಅವರಿಂದ ಭರತ ನಾಟ್ಯ ಪ್ರದರ್ಶನ. ಕೋರಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.</p>.<p>ಸಾಯಬಣ್ಣಾ ಗೋಗಿ, ಕಲ್ಲಯ್ಯಸ್ವಾಮಿ ಪಡದಳ್ಳಿ, ಬಸವರಾಜ ಅಳಂದ, ಈರಣ್ಣ ಕುಲಕುಂದಿ, ಚಂದ್ರಶೇಖರ ಗೋಗಿ ಅವರಿಂದ ಸಂಗೀತ ಸೇವೆ. ಶಿವಲಿಂಗ ಭೀಮನಳ್ಳಿ ಪರಿವಾರದಿಂದ ಸಿದ್ದತೋಟೇಂದ್ರರಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ: ‘</strong>ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠಕ್ಕೆ ಭಕ್ತರೇ ಅಸ್ತಿ. ತನುಮನದ ಭಕ್ತಿ ಸಮರ್ಪಿಸಿದ ಭಕ್ತರಿಗೆ ಸಿದ್ದಿಪ್ರಾಪ್ತಿ ಸಿಗಲಿದೆ ಎನ್ನುವುದಕ್ಕೆ ನಾನೇ ಸಾಕ್ಷಿ. ತೋಟೇಂದ್ರ ಶ್ರೀಗಳ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾಗಿದ್ದೇನೆ’ ಎಂದು ಶಾಸಕ ಬಸವರಾಜ ಮತ್ತಿಮೂಡು ಹೇಳಿದರು.</p>.<p>ನಾಲವಾರದ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ, ಮಾಸಿಕ ಶಿವಾನುಭವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಶಾಸಕನಾಗಿ ಕೆಲಸ ಮಾಡಲು ಶ್ರೀಗಳ ಮತ್ತು ನನ್ನ ಭಾಗದ ಜನರ ಆಶೀರ್ವಾದ ಕಾರಣ’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಸಿದ್ದ ತೋಟೆಂದ್ರ ಶಿವಾಚಾರ್ಯ ಮಾತನಾಡಿ, ‘ಮಠದ ಆವರಣದಲ್ಲಿ 11 ದಿನ ನಡೆದ ಕಡಕೋಳ ಮಡಿವಾಳೇಶ್ವರ ಪ್ರವಚನ, ಭಕ್ತರ ಮನಸ್ಸು ಪರಿವರ್ತನೆ ಮಾಡಿದೆ. ಶರಣರ ಚಿಂತನೆ, ಜೀವನ, ಎದುರಿಸಿದ ಸಮಸ್ಯೆ ಮತ್ತು ಸವಾಲುಗಳು ನಮಗೆ ಆದರ್ಶವಾಗಬೇಕು’ ಎಂದರು.</p>.<p>‘ಶರಣ ಮಡಿವಾಳಪ್ಪನವರು ಅನುಭವಿಸಿದ ಕಷ್ಟ ನೋವು ಅವರ ವಚನಗಳಾಗಿ, ಹಾಡುಗಳಾಗಿ ಹೊರ ಬಂದಿವೆ. ಇಂದಿಗೂ ಪ್ರತಿ ಪ್ರವಚನಕಾರರಿಗೆ ಕಡಕೋಳ ಮಡಿವಾಳೇಶ್ವರರ ವಚನಗಳು ಅಗ್ರಗಣ್ಯ. ಶ್ರೀಮಠದಲ್ಲಿ ನಡೆಯುವ ಭಕ್ತರ ಹರಕೆಯ ತನಾರತಿ ಮಹೋತ್ಸವಕ್ಕೆ ಸೇರುವ ಭಕ್ತರಿಂದ ಇಂದಿಗೂ ಜೀವಂತ ಪವಾಡವಾಗಿದೆ’ ಎಂದರು.</p>.<p>ತನಾರತಿಯಲ್ಲಿ ತಲೆ ಎತ್ತಿ ನಿಲ್ಲುವ ಬತ್ತಿ, ತಾನು ಸುಟ್ಟು ಬೆಳಕನ್ನು ನೀಡುವದಕ್ಕೆ ದ್ಯೋತಕವಾಗಿದೆ. ನಮ್ಮ ಬದುಕು ದೀಪದಲ್ಲಿರುವ ಬತ್ತಿಯಾಗಬೇಕು’ ಎಂದು ಹೇಳಿದರು.</p>.<p>ಹನ್ನೊಂದು ದಿನ ಜರುಗಿದ ಕಡಕೋಳ ಮಡಿವಾಳೇಶ್ವರರ ಪ್ರವಚನವನ್ನು ಸಿದ್ದ ಬಸವ ಕಬೀರ ಸ್ವಾಮಿಗಳು ಮಂಗಳಗೊಳಿಸಿದರು. ತೋಟೆಂದ್ರ ಬೆಂಗಳೂರ, ಮಹೇಶ ಸ್ವಾಮಿ ಚಿಂಚೋಳಿ, ನಾಗೇಶ ಪಾಟೀಲ ಧರ್ಮಾಪೂರ, ಮಹಾದೇವ ಗಂವಾರ ಇದ್ದರು.</p>.<p>ಶರಣಕುಮಾರ ಜಾಲಹಳ್ಳಿ, ಕಾಶೀನಾಥ ಮಳಗ, ಸಿದ್ದ ಔರಾದಿ ಪ್ರಾರ್ಥಿಸಿದರು, ಸಿದ್ದರಾಜ ಕರೆಡ್ಡಿ ಸ್ವಾಗತಿಸಿದರು, ಪ್ರತೀಕ್ಷಾ ಗಾರಂಪಳ್ಳಿ, ನಿಶಾ ಪಡಶೆಟ್ಟಿ ಅವರಿಂದ ಭರತ ನಾಟ್ಯ ಪ್ರದರ್ಶನ. ಕೋರಿಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.</p>.<p>ಸಾಯಬಣ್ಣಾ ಗೋಗಿ, ಕಲ್ಲಯ್ಯಸ್ವಾಮಿ ಪಡದಳ್ಳಿ, ಬಸವರಾಜ ಅಳಂದ, ಈರಣ್ಣ ಕುಲಕುಂದಿ, ಚಂದ್ರಶೇಖರ ಗೋಗಿ ಅವರಿಂದ ಸಂಗೀತ ಸೇವೆ. ಶಿವಲಿಂಗ ಭೀಮನಳ್ಳಿ ಪರಿವಾರದಿಂದ ಸಿದ್ದತೋಟೇಂದ್ರರಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>