ಪ್ರಸಿದ್ಧ ರಾಜಮನೆತನಗಳು ಆಳಿದ ಈ ಭಾಗದಲ್ಲಿ ಕಲ್ಯಾಣಿಗಳು, ಪುಷ್ಕರಣಿಗಳು, ಬಾವಿಗಳು, ತಾಲಾಬ್ (ಕೆರೆಗಳು)ಗಳಿಗೆ ಬರವಿಲ್ಲ. ನಿರ್ವಹಣೆ ಇಲ್ಲದೇ ಅವು ಪಾಳು ಬಿದ್ದಿವೆ. ಸಾಂಪ್ರದಾಯಿಕ ನೀರಿನ ಮೂಲಗಳಾದ ಇವುಗಳನ್ನು ಪುನರುಜ್ಜೀವನಗೊಳಿಸಬೇಕು. ಇದಕ್ಕೆ ಸರ್ಕಾರವನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ. ಆಯಾ ಗ್ರಾಮಸ್ಥರೇ ಪರಸ್ಪರ ಸಹಕಾರ ಭಾವನೆಯಿಂದ ಇದನ್ನು ಸಾಧಿಸಬೇಕು. ಓಡುವ ನೀರನ್ನು ನಿಧಾನಗೊಳಿಸಬೇಕು. ಅಂದಾಗ ಮಾತ್ರ ಆ ನೀರು ಅಂತರ್ಜಲ ಸೇರುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತದೆ. ಆ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.