<p><strong>ಅಫಜಲಪುರ: ‘</strong>ಮಕ್ಕಳು ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯ ಹೊಂದಿದರೆ ಬದುಕಿಗೆ ಅದು ದಾರಿದೀಪವಾಗುತ್ತದೆ. ಎಲ್ಲ ಆಸ್ತಿಗಿಂತಲೂ ಪುಸ್ತಕಗಳು ಎಂದೆಂದಿಗೂ ದೊಡ್ಡ ಆಸ್ತಿ’ ಎಂದು ಸಾಹಿತಿ ಪರಮಾನಂದ ಸರಸಂಬಿ ಹೇಳಿದರು.</p>.<p>ತಾಲ್ಲೂಕಿನ ಕೆಕ್ಕರ್ ಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಪುಸ್ತಕ ಮೇಳ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಂದು ಗ್ರಂಥಾಲಯ ಕಟ್ಟಿದರೆ ನೂರಾರು ವಿದ್ವಾಂಸರು ಹುಟ್ಟುತ್ತಾರೆ’ ಎಂಬ ಬಾಬಾಸಾಹೇಬರ ಮಾತನ್ನು ಮಕ್ಕಳಿಗೆ ನೆನಪಿಸಿದರು.</p>.<p>‘ನಾವೆಲ್ಲರೂ ಆಧುನಿಕತೆಯ ಭರಾಟೆಯಲ್ಲಿ ಪುಸ್ತಕ ಓದುವುದನ್ನು ಕಡಿಮೆ ಮಾಡಿದ್ದೇವೆ. ಓದುವುದನ್ನು ನಿಲ್ಲಿಸಿದರೆ, ನಿಜವಾದ ಸಂತಸ ಮತ್ತು ಜ್ಞಾನದಿಂದ ವಂಚಿತರಾಗುತ್ತೇವೆ. ತಂದೆ-ತಾಯಿ ಮತ್ತು ಸಂಬಂಧಿಕರು ಕೊಟ್ಟ ಹಣದಲ್ಲಿ ಕನಿಷ್ಠ ಅರ್ಧ ಭಾಗವನ್ನು ಉಳಿಸಿ ಪುಸ್ತಕಗಳನ್ನು ಖರೀದಿಸಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ಶಾಲಾ ಗ್ರಂಥಾಲಯದಲ್ಲಿನ ಎಲ್ಲ ಪುಸ್ತಕಗಳನ್ನು ದಿನವಿಡೀ ಪ್ರದರ್ಶನಕ್ಕೆ ಇಡಲಾಗಿತ್ತು. ಸರದಿಯಂತೆ ಆಯಾ ತರಗತಿಯ ಮಕ್ಕಳಿಗೆ ಪುಸ್ತಕಗಳನ್ನು ನೋಡಲು, ಓದಲು ಮತ್ತು ಪುಸ್ತಕಗಳ ಮಾಹಿತಿಯನ್ನು ಶಿಕ್ಷಕರು ನೀಡಿದರು.</p>.<p>ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕುಪೇಂದ್ರ ಪೂಜಾರಿ, ಮುಖ್ಯಶಿಕ್ಷಕ ಮನೋಹರ ಪಾಟೀಲ, ಶಿಕ್ಷಕರಾದ ಜಾವೀದ ಹುಂಡೇಕಾರ, ಸಂಗೀತಾ ಬುಳ್ಳಾ, ದೇವೇಂದ್ರ ರಾಠೋಡ ಮತ್ತು ಸಿದ್ದಪ್ಪ ವಾಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ: ‘</strong>ಮಕ್ಕಳು ಮನೆಯಲ್ಲಿ ಒಂದು ಪುಟ್ಟ ಗ್ರಂಥಾಲಯ ಹೊಂದಿದರೆ ಬದುಕಿಗೆ ಅದು ದಾರಿದೀಪವಾಗುತ್ತದೆ. ಎಲ್ಲ ಆಸ್ತಿಗಿಂತಲೂ ಪುಸ್ತಕಗಳು ಎಂದೆಂದಿಗೂ ದೊಡ್ಡ ಆಸ್ತಿ’ ಎಂದು ಸಾಹಿತಿ ಪರಮಾನಂದ ಸರಸಂಬಿ ಹೇಳಿದರು.</p>.<p>ತಾಲ್ಲೂಕಿನ ಕೆಕ್ಕರ್ ಸಾವಳಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಪುಸ್ತಕ ಮೇಳ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒಂದು ಗ್ರಂಥಾಲಯ ಕಟ್ಟಿದರೆ ನೂರಾರು ವಿದ್ವಾಂಸರು ಹುಟ್ಟುತ್ತಾರೆ’ ಎಂಬ ಬಾಬಾಸಾಹೇಬರ ಮಾತನ್ನು ಮಕ್ಕಳಿಗೆ ನೆನಪಿಸಿದರು.</p>.<p>‘ನಾವೆಲ್ಲರೂ ಆಧುನಿಕತೆಯ ಭರಾಟೆಯಲ್ಲಿ ಪುಸ್ತಕ ಓದುವುದನ್ನು ಕಡಿಮೆ ಮಾಡಿದ್ದೇವೆ. ಓದುವುದನ್ನು ನಿಲ್ಲಿಸಿದರೆ, ನಿಜವಾದ ಸಂತಸ ಮತ್ತು ಜ್ಞಾನದಿಂದ ವಂಚಿತರಾಗುತ್ತೇವೆ. ತಂದೆ-ತಾಯಿ ಮತ್ತು ಸಂಬಂಧಿಕರು ಕೊಟ್ಟ ಹಣದಲ್ಲಿ ಕನಿಷ್ಠ ಅರ್ಧ ಭಾಗವನ್ನು ಉಳಿಸಿ ಪುಸ್ತಕಗಳನ್ನು ಖರೀದಿಸಬೇಕು’ ಎಂದು ಅವರು ಸಲಹೆ ನೀಡಿದರು.</p>.<p>‘ಶಾಲಾ ಗ್ರಂಥಾಲಯದಲ್ಲಿನ ಎಲ್ಲ ಪುಸ್ತಕಗಳನ್ನು ದಿನವಿಡೀ ಪ್ರದರ್ಶನಕ್ಕೆ ಇಡಲಾಗಿತ್ತು. ಸರದಿಯಂತೆ ಆಯಾ ತರಗತಿಯ ಮಕ್ಕಳಿಗೆ ಪುಸ್ತಕಗಳನ್ನು ನೋಡಲು, ಓದಲು ಮತ್ತು ಪುಸ್ತಕಗಳ ಮಾಹಿತಿಯನ್ನು ಶಿಕ್ಷಕರು ನೀಡಿದರು.</p>.<p>ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕುಪೇಂದ್ರ ಪೂಜಾರಿ, ಮುಖ್ಯಶಿಕ್ಷಕ ಮನೋಹರ ಪಾಟೀಲ, ಶಿಕ್ಷಕರಾದ ಜಾವೀದ ಹುಂಡೇಕಾರ, ಸಂಗೀತಾ ಬುಳ್ಳಾ, ದೇವೇಂದ್ರ ರಾಠೋಡ ಮತ್ತು ಸಿದ್ದಪ್ಪ ವಾಳಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>