‘ನನಗೆ ಅವಕಾಶ ನೀಡಿದ ಕಸಾಪ ಸದಸ್ಯರಿಗೆ ಚಿರಋಣಿ. ಜಿಲ್ಲೆಯ ಜನರ ಆಶಯದಂತೆ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಶ್ರಮಿಸಿದ್ದೇನೆ. ಅನುದಾನದ ಕೊರತೆ ನಡುವೆಯೂ ನನ್ನ ಅವಧಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರಕಟಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಜನರ ಸಹಾಯ, ಸಹಕಾರದಿಂದ ಕನ್ನಡ ಭವನ ನಿರ್ಮಿಸಿ, ಇಲ್ಲಿ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ ತೃಪ್ತಿ ನನಗಿದೆ’ ಎಂದರು.