ಅಂದು ಗ್ರಾಮದ ಸುಭಾಷ್ ಸಂಬಣ್ಣ ಎಂಬಾತ ಮದ್ಯ ಸೇವಿಸಿದ ಮತ್ತಿನಲ್ಲಿ ಕೈಯಲ್ಲಿ ಬಡಿಗೆ ಹಿಡಿದು ಬಂದು ಮಹಿಳೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನ ವಿರುದ್ಧ ಕೇಸ್ ಮಾಡುತ್ತೀಯಾ. ಓಣಿಯಲ್ಲಿರುವ ಸಿಕ್ಕ ಸಿಕ್ಕವರನ್ನು ನನ್ನ ವಿರುದ್ಧ ಸಾಕ್ಷಿ ಹೇಳಲು ಪ್ರಚೋದಿಸುತ್ತೀಯಾ ಎಂದು ಬಯ್ಯುತ್ತಾ ಬಡಿಗೆಯಿಂದ ಹಲ್ಲೆ ಮಾಡಿದ. ಇದನ್ನು ಅನುಸರಿಸಿದ ತಿಪ್ಪಣ್ಣ ಭೀಮಶ್ಯಾ, ಅರುಣ ಭೀಮಶ್ಯಾ ಮುದ್ನಾಳ, ಚಂದ್ರಪ್ಪ ಗುಂಡಪ್ಪ ಪೋಲಾ ಹಾಗೂ ಅಂಬರೀಷ ಸಂಬಣ್ಣ ಸಹ ಹಲ್ಲೆ ಮಾಡಿದರು ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದರು.