<p><strong>ಕಾಳಗಿ</strong>: ‘ಯಾವುದೇ ದೇಶ ಅಥವಾ ರಾಷ್ಟ್ರ ಕಟ್ಟುವಲ್ಲಿ ಆ ದೇಶದ ಯುವಕರ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಬೋನಾಳ ಅಭಿಪ್ರಾಯಪಟ್ಟರು.</p>.<p>ಬುಧವಾರ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ತಮ್ಮ ಕಾಲೇಜಿನ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.</p>.<p>‘ಹಳ್ಳಿಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಜವಾಬ್ದಾರಿ ಕೂಡ ಆಗಿದೆ’ ಎಂದರು.</p>.<p>ಶಿಬಿರದ ಕಾರ್ಯಕ್ರಮಾಧಿಕಾರಿ ಸುಭಾಷ ಶೀಲವಂತ ಮಾತನಾಡಿ ‘ಹಳ್ಳಿಗಳು ಬದಲಾವಣೆಯಾದರೆ ಇಡಿ ದೇಶವೇ ಬದಲಾವಣೆ ಆದಂತೆ. ನಮ್ಮ ರಾಷ್ಟ್ರ ನಾಯಕರ ಕನಸು ಕೂಡ ಇದೇ ಆಗಿತ್ತು’ ಎಂದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಎಲ್ಮಡಗಿ ಉದ್ಘಾಟಿಸಿದರು. ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶರೆಡ್ಡಿ ಕಪ್ಪರಗಿ ಧ್ವಜಾರೋಹಣ ಮಾಡಿದರು.</p>.<p>ಗ್ರಾ.ಪಂ ಉಪಾಧ್ಯಕ್ಷೆ ಬಾನುಬೇಗಂ ಅಹ್ಮದ್ ಪಾಶಾ, ಮುಖ್ಯಶಿಕ್ಷಕಿ ರಾಚಮ್ಮ ಮಠಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಿಂದ್ರ ಪೂಜಾರಿ, ಗ್ರಾ.ಪಂ ಸದಸ್ಯ ಆನಂದಕುಮಾರ ಜಾಧವ, ಮಾಜಿ ಸದಸ್ಯ ಮಲ್ಲಪ್ಪ ಚಿಂತಕುಂಟಾ, ಶಿಬಿರಾಧಿಕಾರಿ ವಿರೇಶ ಭರಮಶೆಟ್ಟಿ ವೇದಿಕೆಯಲ್ಲಿದ್ದರು.</p>.<p>ಉಪನ್ಯಾಸಕ ಶೌಕತ್ ಅಲಿ ನಾವದಗೀಕರ್ ನಿರೂಪಿಸಿ, ಸುರೇಶ ನಾಗೂರೆ ವಂದಿಸಿದರು. ಶಿಬಿರಾರ್ಥಿಗಳು ಇದ್ದರು. ಶಿಬಿರ ನ.4ರಂದು ಕೊನೆಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ‘ಯಾವುದೇ ದೇಶ ಅಥವಾ ರಾಷ್ಟ್ರ ಕಟ್ಟುವಲ್ಲಿ ಆ ದೇಶದ ಯುವಕರ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ್ ಬೋನಾಳ ಅಭಿಪ್ರಾಯಪಟ್ಟರು.</p>.<p>ಬುಧವಾರ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿ ತಮ್ಮ ಕಾಲೇಜಿನ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.</p>.<p>‘ಹಳ್ಳಿಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಜವಾಬ್ದಾರಿ ಕೂಡ ಆಗಿದೆ’ ಎಂದರು.</p>.<p>ಶಿಬಿರದ ಕಾರ್ಯಕ್ರಮಾಧಿಕಾರಿ ಸುಭಾಷ ಶೀಲವಂತ ಮಾತನಾಡಿ ‘ಹಳ್ಳಿಗಳು ಬದಲಾವಣೆಯಾದರೆ ಇಡಿ ದೇಶವೇ ಬದಲಾವಣೆ ಆದಂತೆ. ನಮ್ಮ ರಾಷ್ಟ್ರ ನಾಯಕರ ಕನಸು ಕೂಡ ಇದೇ ಆಗಿತ್ತು’ ಎಂದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಎಲ್ಮಡಗಿ ಉದ್ಘಾಟಿಸಿದರು. ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಗಿರೀಶರೆಡ್ಡಿ ಕಪ್ಪರಗಿ ಧ್ವಜಾರೋಹಣ ಮಾಡಿದರು.</p>.<p>ಗ್ರಾ.ಪಂ ಉಪಾಧ್ಯಕ್ಷೆ ಬಾನುಬೇಗಂ ಅಹ್ಮದ್ ಪಾಶಾ, ಮುಖ್ಯಶಿಕ್ಷಕಿ ರಾಚಮ್ಮ ಮಠಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವಿಂದ್ರ ಪೂಜಾರಿ, ಗ್ರಾ.ಪಂ ಸದಸ್ಯ ಆನಂದಕುಮಾರ ಜಾಧವ, ಮಾಜಿ ಸದಸ್ಯ ಮಲ್ಲಪ್ಪ ಚಿಂತಕುಂಟಾ, ಶಿಬಿರಾಧಿಕಾರಿ ವಿರೇಶ ಭರಮಶೆಟ್ಟಿ ವೇದಿಕೆಯಲ್ಲಿದ್ದರು.</p>.<p>ಉಪನ್ಯಾಸಕ ಶೌಕತ್ ಅಲಿ ನಾವದಗೀಕರ್ ನಿರೂಪಿಸಿ, ಸುರೇಶ ನಾಗೂರೆ ವಂದಿಸಿದರು. ಶಿಬಿರಾರ್ಥಿಗಳು ಇದ್ದರು. ಶಿಬಿರ ನ.4ರಂದು ಕೊನೆಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>