ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ 7೦ನೇ ಶ್ರೀ ಸಂಗಮೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಸಂಗಮೇಶ್ವರ ಜಾತ್ರಾ ಪ್ರಯುಕ್ತ ಜರುಗಿದ ಭವ್ಯ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರತಿ ವರ್ಷ ಯುಗಾದಿ ದಿನದಂದು ಸಂಗಮೇಶ್ವರ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವ ಆರಂಭಗೊಂಡು 4 ದಿವಸಗಳು ಪಲ್ಲಕ್ಕಿಯ ಮೆರವಣಿಗೆ ನಡೆಯುತ್ತದೆ. ನಂತರ 5 ನೇ ದಿವಸಕ್ಕೆ ರಥೋತ್ಸವ ನಡೆಯುತ್ತದೆ.
ಜಾತ್ರಾ ಪ್ರಯುಕ್ತ ಕುಸ್ತಿ ,ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದ್ದು, ಶುಕ್ರವಾರ ರಾತ್ರಿ ‘ಪಾಪ ತೊಳೆದ ಪುಣ್ಯವಂತೆ’ ಸಾಮಾಜಿಕ ನಾಟಕ ನಡೆಯಲಿದೆ.
1949 ರಲ್ಲಿ ಆರಂಭವಾದ ಜಾತ್ರೆಯು ಚಿಂಚೋಳಿ ತಾಲ್ಲೂಕಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ ಎಂದು ಚಿಮ್ಮನಚೋಡ ಗ್ರಾಮದ ಗಣ್ಯರಾದ ಆನಂದ ಕುಮಾರ್ ಬೆಡಸೂರ ತಿಳಿಸಿದ್ದಾರೆ.