ಅನೇಕ ಕಡೆಗಳಲ್ಲಿ ಕೂಡು ರಸ್ತೆ ನಿರ್ಮಿಸಿ ತಾಂಡಾ, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಿದ್ದೇವೆ. ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ, ಶಾಲಾ ಕಟ್ಟಡ, ಸಮುದಾಯ ಭವನ ಸೇರಿದಂತೆ ನಗರೋತ್ಥಾನ ಹಾಗೂ ಗ್ರಾಮ ವಿಕಾಸ ಯೋಜನೆಯಡಿ ಅನೇಕ ಗ್ರಾಮಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಜಾತಿ, ಧರ್ಮ, ಹಣ, ಹೆಂಡಕ್ಕೆ ಮಾರು ಹೋಗದೆ ಅಭಿವೃದ್ಧಿಪರ ವ್ಯಕ್ತಿಗಳಿಗೆ ನೀವು ಮತ ನೀಡಬೇಕು. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದರು.