ಸಿಹಿಭೋಜನ ಹಾಗೂ ಮಾಂಸದೂಟ ನೈವೇದ್ಯ ಗದ್ದುಗೆಗೆ ಸಮರ್ಪಿಸುವುದು ಈ ಜಾತ್ರೆ ವಿಶೇಷ.ಶುಕ್ರವಾರ ಬೆಳಿಗ್ಗೆಯಿಂದ ಗದ್ದುಗೆಗೆ ವಿವಿಧ ಪೂಜೆ ನಡೆದವು. ಗ್ರಾಮದ ಹನುಮಾನ್ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕೈಕುಸ್ತಿ ಸಾರ್ವಜನಿಕರ ಗಮನ ಸೆಳೆಯಿತು. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಭಕ್ತರು ಹರಕೆ ಸಲ್ಲಿಸಿದರು.