ಸುಂಕದವರಮನೆ ರಾಧಾಕೃಷ್ಣ ಎಂಬುವರ ಮನೆ ಎದುರಿನ ಗುಡ್ಡದಲ್ಲಿ ಏಕಾಏಕಿ ಬಿರುಕು ಕಾಣಿಸಿಕೊಂಡಿದೆ. ಗುಡ್ಡದ ಪಾರ್ಶ್ವಭಾಗದಿಂದ ಮೂಡಿದ ಬಿರುಕು ಗುಡ್ಡದ ಮಧ್ಯ ಭಾಗದವರೆಗೂ ವ್ಯಾಪಿಸಿದೆ. 100 ಮೀಟರ್ಗೂ ಹೆಚ್ಚು ಪ್ರಮಾಣದಲ್ಲಿ ಗುಡ್ಡ ಬಾಯಿಬಿಟ್ಟಿದೆ. ಇದು ಸಹಜವಾಗಿಯೇ ಗುಡ್ಡದ ಆಸುಪಾಸಿನಲ್ಲಿ ವಾಸಿಸುವ ಜನರಲ್ಲಿ ಆತಂಕ ತಂದಿದೆ. ಒಮ್ಮೆ ಬಿರುಕು ಬಿಟ್ಟ ಗುಡ್ಡ ಕುಸಿದು ಬಿದ್ದರೆ ಭಾರಿ ಪ್ರಮಾಣದ ಅನಾಹುತ ಆಗಲಿದೆ. ಅಚ್ಚುಕಟ್ಟು ಪ್ರದೇಶದ ಆಸ್ತಿ ಪಾಸ್ತಿಗೆ ಹಾನಿಯಾಗಲಿದೆ. ಕುಟುಂಬ ಬೀದಿಗೆ ಬೀಳಲಿದೆ ಎಂಬುದು ಜನರ ಅಳಲು.