ತೋಟದಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ, ಹೆರಳೆಕಾಯಿ, ಲಿಂಬೆ, ಬಾಳೆ ಬೆಳೆದರೆ; ಗದ್ದೆಯಲ್ಲಿ ಇಂಟಾನ್, ರಾಜಮುಡಿ, ಚಿಪ್ಪುಗ ಭತ್ತವನ್ನು ಬೆಳೆಯುತ್ತಾರೆ. ಪ್ರತಿವರ್ಷ ಇಳುವರಿ ಹೆಚ್ಚಳಕ್ಕೆ ವಿಭಿನ್ನ ಪ್ರಯೋಗ ಮಾಡುತ್ತಾರೆ. ಕೃಷಿ ಇಲಾಖೆ ನೀಡುವ ಸಲಹೆ, ಸಹಕಾರ ಪಡೆದು ಆಯಾ ಅವಧಿಗೆ ಕೃಷಿಯ ಆರಂಭ, ಕಟಾವು ನಡೆಯುತ್ತಿದೆ.