ರೈತರ ಹತ್ತಾರು ಎಕರೆ ಪ್ರದೇಶಕ್ಕೆ ನೀರು ಪೂರೈಸುವ ಉದ್ದೇಶದಿಂದ ಈ ನಾಲೆ ನಿರ್ಮಿಸಲಾಗಿದೆ. ನಾಲೆ ನಿರ್ಮಾಣ ಜಾಗದ ಮಾಲೀಕರಿಗೆ ನೀರಾವರಿ ಇಲಾಖೆಯಿಂದ ಪರಿಹಾರವನ್ನು ಸಹ ನೀಡಲಾಗಿದೆ. ಈ ನಾಲೆಯ ಪಕ್ಕದಲ್ಲಿ ವರೇಂದ್ರ ಅವರ ಜಮೀನು ಇದ್ದು, ಅವರ ಜಮೀನಿಗೆ ಮಾತ್ರ ಬೇಲಿ ಹಾಕದೆ ನಾಲೆಯನ್ನು ಸೇರಿಸಿಕೊಂಡು ಬೇಲಿ ಹಾಕುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಹಾಗೂ ರೈತರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.