ಕುಜಗೇರಿ ಗ್ರಾಮದ ಸಿದ್ದೇಗೌಡ ಅವರ ಮಗಳ ವಿವಾಹ ಸಮಾರಂಭ ಇಲ್ಲಿ ನಡೆಯುತ್ತಿತ್ತು. ಈ ವೇಳೆ ಅದೇ ಗ್ರಾಮದ ದಿವೇಶ್ ಎಂಬುವರು ತಮ್ಮ ಕೈಯಲ್ಲಿದ್ದ 18 ಗ್ರಾಂ ಚಿನ್ನದ ಬ್ರಾಸ್ಲೆಟ್ ಆಕಸ್ಮಿಕವಾಗಿ ಕಳೆದುಕೊಂಡರು. ಈ ಆಭರಣವು ಬಳ್ಳಾರಿಯಿಂದ ಬಂದಿದ್ದ ಕಾರ್ತಿಕ್ ಎಂಬುವವರಿಗೆ ಸಿಕ್ಕಿತು. ಸಿಕ್ಕಿದಾಕ್ಷಣ ಕಾರ್ತಿಕ್ ಅವರು ಮದುವೆ ಮನೆಯವರಿಗೆ ನೀಡಿ, ಯಾರಾದರೂ ಕಳೆದುಕೊಂಡಿದ್ದೇವೆ ಎಂದು ಬಂದರೆ ಅವರಿಗೆ ನೀಡುವಂತೆ ತಿಳಿಸಿ ವಾಪಸ್ ತೆರಳಿದರು.