‘ಮೊದಲಿಗೆ ಎಂಟು ಮಂದಿ ಎನ್ನುವ ಮಾಹಿತಿ ಇತ್ತು. ಆದರೆ, ತನಿಖೆ ನಡೆಸಿದಾಗ ಕಡಮಕಲ್ ಸಮೀಪದ ಕೂಜಿಮಲೆಯಲ್ಲಿ ಈಚೆಗಷ್ಟೇ ಆರಂಭವಾಗಿರುವ ಚಿಕ್ಕ ಅಂಗಡಿಯಲ್ಲಿ ನಾಲ್ವರು ತಮ್ಮನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ₹ 3,192ಕ್ಕೆ ದಿನಸಿ ಖರೀದಿಸಿ ತೆರಳಿದ್ದಾರೆ. ಅವರ ಚಲನವಲನವು ನಕ್ಸಲರನ್ನು ಹೋಲುತ್ತಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದರು. ಆದರೆ, ಸ್ಥಳದಲ್ಲಿ ಯಾವುದೇ ಕರಪತ್ರವಾಗಲಿ, ಬೆದರಿಕೆ ಹಾಕಿರುವ ಕುರಿತಾಗಲಿ ಸಾಕ್ಷ್ಯಗಳು ಲಭಿಸಿಲ್ಲ. ಹೀಗಿದ್ದರೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.