ಮಡಿಕೇರಿ: ಸಂವಿಧಾನ ಜಾಗೃತಿ ಜಾಥಾಕ್ಕೆ ಮಡಿಕೇರಿಯಲ್ಲಿ ಶಾಲಾಮಕ್ಕಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸ್ವಾಗತ ಕೋರಿದರು.
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ವತಿಯಿಂದ ಇಲ್ಲಿ ರಾಜಾಸೀಟ್ ಉದ್ಯಾನದ ಮುಂಭಾಗದಿಂದ ಬುಧವಾರ ಆರಂಭವಾದ ಮೆರವಣಿಗೆ ಕಾವೇರಿ ಕಲಾಕ್ಷೇತ್ರದವರೆಗೂ ನಡೆಯಿತು.
ಮಹಿಳೆಯರು ತುಂಬು ಕಳಸವಿಡಿದು ಹಾಗೂ ಮಕ್ಕಳು ಬ್ಯಾಂಡ್ ವಾದನದ ಮೂಲಕ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.