ಕಳೆದ 10 ದಿನಗಳಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿದ್ದರೂ, ನರಭಕ್ಷಕ ಹುಲಿ ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಶ್ರೀಮಂಗಲ, ನಿಟ್ಟೂರು, ಬಾಳೆಲೆ, ಬೆಳ್ಳೂರು, ಪೊನ್ನಂಪೇಟೆ ಭಾಗದಲ್ಲಿ ಮತ್ತಿಗೋಡು ಶಿಬಿರದ ಎರಡು ಸಾಕಾನೆ, ಬಂಡೀಪುರದಿಂದ ಕರೆ ತಂದಿರುವ ಶ್ವಾನ ‘ರಾಣಾ’ ನೆರವು ಪಡೆದು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ.