50 ಮಂದಿ ಪರೀಕ್ಷೆ:ಇಂಡಿಗೊ ವಿಮಾನದ ಮೂಲಕ ಈ ವ್ಯಕ್ತಿ, ಮಾರ್ಚ್ 15ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಂದೇ ಬೆಂಗಳೂರಿನ ಕೆಲವು ಕಡೆ ಓಡಾಟ ನಡೆಸಿ, ರಾಜಹಂಸ ಬಸ್ ಮೂಲಕ 16ರಂದು ಮುಂಜಾನೆ ಮೂರ್ನಾಡಿಗೆ ಬಂದಿದ್ದರು. ಅಲ್ಲಿಂದ ಕೇತುಮೊಟ್ಟೆಗೆ ತಲುಪಿದ್ದರು. ಅಂದೇ ಕಕ್ಕಬ್ಬೆ ಆಸುಪಾಸಿನಲ್ಲಿ ಸುತ್ತಾಟ ನಡೆಸಿದ್ದರು. ಮಸೀದಿಗೂ ತೆರಳಿದ್ದರು. ಮಾರ್ಚ್ 17ರಂದು ರೋಗದ ಲಕ್ಷಣ ಕಂಡುಬಂದ ಕಾರಣ ಅವರೇ ಖುದ್ದು ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.