ಕುಶಾಲನಗರ: ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊರ್ವ ಮೃತಪಟ್ಟಿದ್ದು, ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದೆ.
ಪಟ್ಟಣದ ಕಾಳೇಘಾಟ್ ಮುಂಭಾಗದ ನಿವಾಸಿ ಲಾರಿ ಚಾಲಕ ಗಂಗಾಧರ್ (65) ಮೃತ ವ್ಯಕ್ತಿ. ಕೊಡಗು-ಮೈಸೂರು ಗಡಿ ಕಾವೇರಿ ನದಿಯ ಹಳೆ ಸೇತುವೆ ಕೆಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಶಾಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.