<p><strong>ಮಡಿಕೇರಿ</strong>: ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆಸಿ ಪಾದಚಾರಿಯೊಬ್ಬರು ಗಾಯಗೊಳ್ಳಲು ಕಾರಣನಾದ ಮಗನಿಗೆ ತಾಯಿಯು ಮತ್ತೆ ಟ್ರ್ಯಾಕ್ಟರ್ ನೀಡಿದ್ದರಿಂದ ಕುಶಾಲನಗರ – ಸುಂದರನಗರ ರಸ್ತೆಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ತಾಯಿ ಟಿ.ತುಳಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಕಳೆದ ವರ್ಷ ಮೇ 31ರಂದು ಬಾಲಕ ಟ್ರ್ಯಾಕ್ಟರ್ ಅನ್ನು ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆಸಿದ್ದ. ಈ ವರ್ಷವೂ ಮೇ 31ರಂದೇ ಅಪಘಾತ ನಡೆದಿದೆ. ಕಳೆದ ವರ್ಷದ ಅಪಘಾತಕ್ಕೆ ಸಂಬಂಧಿಸಿ, ತುಳಸಿ ಅವರಿಗೆ ನ್ಯಾಯಾಲಯವು ₹ 25 ಸಾವಿರ ದಂಡ ವಿಧಿಸಿ, 1 ದಿನ ಜೈಲು ಶಿಕ್ಷೆ ವಿಧಿಸಿತ್ತು. ‘ಸದ್ಯ, ಆಕೆಯ ವಿರುದ್ಧ ಐಪಿಸಿ 279 ಮತ್ತು 304(ಎ) ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಮಕ್ಕಳಿಗೆ ಹಾಗೂ ಚಾಲನಾ ಪರವಾನಗಿ ಹೊಂದಿಲ್ಲದವರಿಗೆ ಚಾಲನೆ ಮಾಡಲು ವಾಹನಗಳನ್ನು ನೀಡಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಸ್ಟಂಟ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಟ್ರ್ಯಾಕ್ಟರ್ನಿಂದ ಡಿಕ್ಕಿ ಹೊಡೆಸಿ ಪಾದಚಾರಿಯೊಬ್ಬರು ಗಾಯಗೊಳ್ಳಲು ಕಾರಣನಾದ ಮಗನಿಗೆ ತಾಯಿಯು ಮತ್ತೆ ಟ್ರ್ಯಾಕ್ಟರ್ ನೀಡಿದ್ದರಿಂದ ಕುಶಾಲನಗರ – ಸುಂದರನಗರ ರಸ್ತೆಯಲ್ಲಿ ಶುಕ್ರವಾರ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ತಾಯಿ ಟಿ.ತುಳಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಕಳೆದ ವರ್ಷ ಮೇ 31ರಂದು ಬಾಲಕ ಟ್ರ್ಯಾಕ್ಟರ್ ಅನ್ನು ಪಾದಾಚಾರಿಯೊಬ್ಬರಿಗೆ ಡಿಕ್ಕಿ ಹೊಡೆಸಿದ್ದ. ಈ ವರ್ಷವೂ ಮೇ 31ರಂದೇ ಅಪಘಾತ ನಡೆದಿದೆ. ಕಳೆದ ವರ್ಷದ ಅಪಘಾತಕ್ಕೆ ಸಂಬಂಧಿಸಿ, ತುಳಸಿ ಅವರಿಗೆ ನ್ಯಾಯಾಲಯವು ₹ 25 ಸಾವಿರ ದಂಡ ವಿಧಿಸಿ, 1 ದಿನ ಜೈಲು ಶಿಕ್ಷೆ ವಿಧಿಸಿತ್ತು. ‘ಸದ್ಯ, ಆಕೆಯ ವಿರುದ್ಧ ಐಪಿಸಿ 279 ಮತ್ತು 304(ಎ) ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>‘ಮಕ್ಕಳಿಗೆ ಹಾಗೂ ಚಾಲನಾ ಪರವಾನಗಿ ಹೊಂದಿಲ್ಲದವರಿಗೆ ಚಾಲನೆ ಮಾಡಲು ವಾಹನಗಳನ್ನು ನೀಡಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಸ್ಟಂಟ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>