ಮುಂಜಾನೆ 6 ಗಂಟೆ ವೇಳೆಯಲ್ಲಿ ಮನೆಯಿಂದ ತಮ್ಮ ಸಾಕು ನಾಯಿ ಕರೆದುಕೊಂಡು ವಾಯು ವಿಹಾರಕ್ಕೆ ಹೊರಟ ರಂಗಸ್ವಾಮಿ, ಸ್ವಲ್ಪ ದೂರ ಹೋಗುವಷ್ಟರಲ್ಲಿ ಕಾಫಿ ತೋಟದಿಂದ ರಸ್ತೆಗೆ ಕಾಡಾನೆ ದಿಢೀರನೆ ನುಗ್ಗಿದೆ. ಈ ವೆಳೆ ಭಯಭೀತರಾಗಿ ಕುಸಿದು ಬಿದ್ದ ರಂಗಸ್ವಾಮಿ ಮೇಲೆ ದಾಳಿ ನಡೆಸಿದ ಆನೆ, ಅವರ ಬಲಗಾಲನ್ನು ತುಳಿದಿದೆ. ಅಷ್ಟೊತ್ತಿಗೆ ಅಕ್ಕಪಕ್ಕದಲ್ಲಿದ್ದ ಜನತೆ ಕೂಗಿ ಆನೆಯನ್ನು ಓಡಿಸಿದ್ದಾರೆ.