‘ನೆಲ್ಯಹುದಿಕೇರಿ, ವಾಲ್ನೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಒಂಟಿ ಸಲಗವೊಂದು ರಾಜಾರೋಷವಾಗಿ ಸುತ್ತಾಡುತ್ತಿದ್ದು, ಕಾರ್ಮಿಕರು ಹಾಗೂ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗಿತ್ತು. ಮನೆಯ ಬಳಿ ನಿಲ್ಲಿಸಿದ್ದ ವಾಹನಗಳ ಮೇಲೆ ಸಲಗ ದಾಳಿ ನಡೆಸಿ ಜಖಂಗೊಳಿಸಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಒಂಟಿ ಸಲಗ ಸೆರೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಒಂಟಿ ಸಲಗ ಸೆರೆಗೆ ಅನುಮತಿ ದೊರಕಿದ್ದು, ಶೀಘ್ರದಲ್ಲಿ ಸಲಗದ ಚಲನವಲನ ಗುರುತಿಸಿ ಸೆರೆ ಹಿಡಿಯಲಾಗುವುದು’ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ತಿಳಿಸಿದ್ದಾರೆ.