<p><strong>ಕುಶಾಲನಗರ (ಕೊಡಗು ಜಿಲ್ಲೆ):</strong> ‘ಪ್ರಜಾಸೌಧ’ ನಿರ್ಮಾಣಕ್ಕಾಗಿ ಭೂಮಿಪೂಜೆ ಮಾಡಲು ಮಂಗಳವಾರ ಇಲ್ಲಿಗೆ ಭೇಟಿ ನೀಡಿದ್ದ ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ರೈತರು ಅಸಮಾಧಾನ ಹೊರ ಹಾಕಿದರು.</p>.<p>‘ಜಮೀನಿನ ಪೋಡಿ ದುರಸ್ತಿಗಾಗಿ ಹತ್ತಾರು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಹಾಗಿಲ್ಲ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ಆರೋಪಿಸಿದರು.</p>.<p>ಪ್ರತಿಕ್ರಿಯಿಸಿದ ಸಚಿವರು, ‘ಕಾನೂನು ರೀತಿಯಲ್ಲಿ ದಾಖಲೆಗಳು ಸರಿ ಇದ್ದರೆ ಮಾತ್ರ ಬೇಗ ದಾಖಲೆ ಸರಿಪಡಿಸಿಕೋಡುತ್ತೇವೆ’ ಎಂದು ಹೇಳಿ ಹೊರಟರು.</p>.<p>ಇದರಿಂದ ಅಸಮಾಧಾನಗೊಂಡ ರೈತರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧ, ನಾವು ಸೋಮವಾರ ವಿಷದ ಬಾಟಲಿಯ ಜೊತೆ ಪ್ರತಿಭಟಿಸಿದರೂ ಸಚಿವರಿಗೆ ಕನಿಷ್ಠ ಸೌಜನ್ಯವೂ ಇಲ್ಲ. ಇನ್ನು ವಿಷ ಕುಡಿಯದೇ ಬೇರೆ ದಾರಿ ಇಲ್ಲ’ ಎಂದರು.</p>.<p>ಇದಕ್ಕೂ ಮುನ್ನ ಸಚಿವರು ಕಾರು ಹತ್ತುವಾಗ, ಅವರ ಬೆಂಬಲಿಗರು ಸಭಿಕರ ಸಾಲಿನಲ್ಲಿ ಕುಳಿತಿದ್ದ ರೈತರನ್ನು ಮನವಿ ಕೊಡುವಂತೆ ಕರೆದರು. ಆದರೆ, ರೈತರು ಒಪ್ಪದೇ ಸಚಿವರೇ ತಮ್ಮ ಬಳಿ ಬರಬೇಕೆಂದು ಹಠ ಹಿಡಿದರು. ನಂತರ, ಸಚಿವರು ರೈತರ ಬಳಿಗೆ ತೆರಳಿ ಮನವಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ (ಕೊಡಗು ಜಿಲ್ಲೆ):</strong> ‘ಪ್ರಜಾಸೌಧ’ ನಿರ್ಮಾಣಕ್ಕಾಗಿ ಭೂಮಿಪೂಜೆ ಮಾಡಲು ಮಂಗಳವಾರ ಇಲ್ಲಿಗೆ ಭೇಟಿ ನೀಡಿದ್ದ ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ರೈತರು ಅಸಮಾಧಾನ ಹೊರ ಹಾಕಿದರು.</p>.<p>‘ಜಮೀನಿನ ಪೋಡಿ ದುರಸ್ತಿಗಾಗಿ ಹತ್ತಾರು ವರ್ಷಗಳಿಂದ ಅರ್ಜಿ ಸಲ್ಲಿಸಿದ್ದರೂ ಹಾಗಿಲ್ಲ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ’ ಎಂದು ಆರೋಪಿಸಿದರು.</p>.<p>ಪ್ರತಿಕ್ರಿಯಿಸಿದ ಸಚಿವರು, ‘ಕಾನೂನು ರೀತಿಯಲ್ಲಿ ದಾಖಲೆಗಳು ಸರಿ ಇದ್ದರೆ ಮಾತ್ರ ಬೇಗ ದಾಖಲೆ ಸರಿಪಡಿಸಿಕೋಡುತ್ತೇವೆ’ ಎಂದು ಹೇಳಿ ಹೊರಟರು.</p>.<p>ಇದರಿಂದ ಅಸಮಾಧಾನಗೊಂಡ ರೈತರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಂದಾಯ ಇಲಾಖೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧ, ನಾವು ಸೋಮವಾರ ವಿಷದ ಬಾಟಲಿಯ ಜೊತೆ ಪ್ರತಿಭಟಿಸಿದರೂ ಸಚಿವರಿಗೆ ಕನಿಷ್ಠ ಸೌಜನ್ಯವೂ ಇಲ್ಲ. ಇನ್ನು ವಿಷ ಕುಡಿಯದೇ ಬೇರೆ ದಾರಿ ಇಲ್ಲ’ ಎಂದರು.</p>.<p>ಇದಕ್ಕೂ ಮುನ್ನ ಸಚಿವರು ಕಾರು ಹತ್ತುವಾಗ, ಅವರ ಬೆಂಬಲಿಗರು ಸಭಿಕರ ಸಾಲಿನಲ್ಲಿ ಕುಳಿತಿದ್ದ ರೈತರನ್ನು ಮನವಿ ಕೊಡುವಂತೆ ಕರೆದರು. ಆದರೆ, ರೈತರು ಒಪ್ಪದೇ ಸಚಿವರೇ ತಮ್ಮ ಬಳಿ ಬರಬೇಕೆಂದು ಹಠ ಹಿಡಿದರು. ನಂತರ, ಸಚಿವರು ರೈತರ ಬಳಿಗೆ ತೆರಳಿ ಮನವಿ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>