ಕುಶಾಲನಗರ: ಪಿರಿಯಾಪಟ್ಟಣ ತಾಲ್ಲೂಕಿನ ಸುಂಕದಳ್ಳಿ ಗ್ರಾಮ ನಿವಾಸಿ ಎಸ್.ಜಿ. ನಿಶಾಂತ್ನನ್ನು ಬಂಧಿಸಿದ ಕುಶಾಲನಗರ ಪೊಲೀಸರು ಆತನ ಬಳಿ ಇದ್ದ 170 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.
ಇಲ್ಲಿನ ಗೌಡ ಸಮಾಜದ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಟೌನ್ ಪೊಲೀಸರು ಡಿವೈಎಸ್ಪಿ ಆರ್.ಪಿ. ಗಂಗಾಧರಪ್ಪ, ವೃತ್ತ ನಿರೀಕ್ಷಕ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಲೋಹಿತ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.