ವಿರಾಜಪೇಟೆ ಪಟ್ಟಣದ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಬಳಕೆಗಾಗಿ ವ್ಯವಸ್ಥೆಗೊಳಿಸಿದ ಟೇಬಲ್ ಮೇಲೆ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನೊಳಗೊಂಡ ಕೈಚೀಲವೊಂದು ಯಾರೋ ಬಿಟ್ಟು ಹೋಗಿರುವುದು ಕಚೇರಿಯ ಸಿಬ್ಬಂದಿಯಾದ ಗಣಪತಿ ಹಾಗೂ ನಾಗು ನಾಯಕ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ಈ ವಿಚಾರವನ್ನು ಪೋಸ್ಟ್ ಮಾಸ್ಟರ್ ಮಂಜುನಾಥ್ ಅವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಪಟ್ಟಣದ ಸುಂಕದಕಟ್ಟೆಯ ನಿವಾಸಿ ಅಶ್ವಿನಿ ಎಂಬುವವರಿಗೆ ಸೇರಿದ ಕೈಚೀಲ ಎಂದು ತಿಳಿದು ಬಂತು.