<p><strong>ಮಡಿಕೇರಿ</strong>: ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 23ರಿಂದ 28ರವರೆಗೆ ನಡೆಯಲಿದೆ.</p>.<p>‘23ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. 27ರಂದು ಮಧ್ಯಾಹ್ನ 2.30ಕ್ಕೆ ದೇವರು ಜಳಕಕ್ಕೆ ಹೊರಡುವ ಕಾರ್ಯಕ್ರಮ ನಡೆಯಲಿದೆ. ನಂತರ, ಸಂಜೆ 6 ಗಂಟೆಗೆ ದೇವಾಲಯದ ಆವರಣದಲ್ಲಿ ದೇವರ ನೃತ್ಯ ಬಲಿ, ನಡೆ ಭಂಡಾರ ನಡೆಯಲಿದೆ’ ಎಂದು ಕ್ಷೇತ್ರದ ಅಧ್ಯಕ್ಷ ಶಶಿ ಜನಾರ್ದನ ಕಟ್ಟೆಮನೆ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಜಾತ್ರೆ ನಡೆಯುವ ಅಷ್ಟೂ ದಿನಗಳ ಕಾಲ ನಿತ್ಯ ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 8.30ಕ್ಕೆ ಭಕ್ತರಿಗೆ ದೇಗುಲದಲ್ಲಿ ಅನ್ನಸಂತರ್ಪಣೆ ಇರಲಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.</p>.<p>ಡಿ. 23ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಸಂಜೆ ಧ್ವಜಾರೋಹಣ, ಮಹಾಪೂಜೆಗಳು ನಡೆಯಲಿವೆ ಎಂದು ಹೇಳಿದರು.</p>.<p>24ರಂದು ಬೆಳಿಗ್ಗೆ 6.30ರಿಂದ ಮಧ್ಯಾಹ್ನದವರೆಗೆ ನಡೆಯುವ ಧಾರ್ಮಿಕ ಕೈಂಕರ್ಯಗಳಲ್ಲಿ ನೈರ್ಮಾಲ್ಯ ಬಲಿ, ಧ್ವಜಸ್ಥಂಭ ಪೂಜೆ, ಮಹಾಪೂಜೆ, ಸಂಜೆ ಶ್ರೀಭೂತಬಲಿ, ಮಹಾಪೂಜೆ ನಡೆಯಲಿದೆ ಎಂದರು.</p>.<p>25ರಂದು ಸಹ ಇದೇ ಬಗೆಯ ಕೈಂಕರ್ಯಗಳು ನಡೆಯಲಿದ್ದು, 26ರಂದು ಬೆಳಿಗ್ಗೆ ತುಲಾಭಾರ ಸೇವೆ ಇರಲಿದೆ. ಸಂಜೆ ನೃತ್ಯಬಲಿ, ವಸಂತಪೂಜೆ, ದೇವರ ಶಯನೋತ್ಸವಗಳು ಜರುಗಲಿವೆ ಎಂದು ಹೇಳಿದರು.</p>.<p>27ರಂದು ಬೆಳಿಗ್ಗೆ ಕವಾಟಪೂಜೆ, ತೈಲಾಭ್ಯಂಜನ, ಪಂಚಾಮೃತ ಅಭಿಷೇಕದ ನಂತರ ಮಧ್ಯಾಹ್ನ 2.30ಕ್ಕೆ ನಂದಿಪಾರೆಯ ಕಾವೇರಿ ನದಿಯಲ್ಲಿ ದೇವರು ಜಳಕಕ್ಕೆ ಹೊರಡಲಿದೆ. ಸಂಜೆ ದೇವರ ನೃತ್ಯಬಲಿ, ನಡೆ ಭಂಡಾರಗಳು ಜರುಗಲಿವೆ ಎಂದರು.</p>.<p>28ರಂದು ಬೆಳಿಗ್ಗೆ ನವಕ ಕಳಸ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆಯೊಂದಿಗೆ ಜಾತ್ರಾ ಮಹೋತ್ಸವ ಸಮಾಪ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.</p>.<p>ಸಮಿತಿ ಕಾರ್ಯದರ್ಶಿ ಕಾಶಿ ಕಾರ್ಯಪ್ಪ, ಸದಸ್ಯರಾದ ಎನ್.ಕೆ.ಗಣಪತಿ, ಪಿ.ಕೆ.ಮಹೇಶ್, ಎಂ.ಟಿ.ದೇವಪ್ಪ, ಬಿ.ಎಸ್.ವೇಣುಗೋಪಾಲ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವವು ಡಿ. 23ರಿಂದ 28ರವರೆಗೆ ನಡೆಯಲಿದೆ.</p>.<p>‘23ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. 27ರಂದು ಮಧ್ಯಾಹ್ನ 2.30ಕ್ಕೆ ದೇವರು ಜಳಕಕ್ಕೆ ಹೊರಡುವ ಕಾರ್ಯಕ್ರಮ ನಡೆಯಲಿದೆ. ನಂತರ, ಸಂಜೆ 6 ಗಂಟೆಗೆ ದೇವಾಲಯದ ಆವರಣದಲ್ಲಿ ದೇವರ ನೃತ್ಯ ಬಲಿ, ನಡೆ ಭಂಡಾರ ನಡೆಯಲಿದೆ’ ಎಂದು ಕ್ಷೇತ್ರದ ಅಧ್ಯಕ್ಷ ಶಶಿ ಜನಾರ್ದನ ಕಟ್ಟೆಮನೆ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>ಜಾತ್ರೆ ನಡೆಯುವ ಅಷ್ಟೂ ದಿನಗಳ ಕಾಲ ನಿತ್ಯ ಮಧ್ಯಾಹ್ನ 1 ಗಂಟೆಗೆ ಹಾಗೂ ರಾತ್ರಿ 8.30ಕ್ಕೆ ಭಕ್ತರಿಗೆ ದೇಗುಲದಲ್ಲಿ ಅನ್ನಸಂತರ್ಪಣೆ ಇರಲಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.</p>.<p>ಡಿ. 23ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಸಂಜೆ ಧ್ವಜಾರೋಹಣ, ಮಹಾಪೂಜೆಗಳು ನಡೆಯಲಿವೆ ಎಂದು ಹೇಳಿದರು.</p>.<p>24ರಂದು ಬೆಳಿಗ್ಗೆ 6.30ರಿಂದ ಮಧ್ಯಾಹ್ನದವರೆಗೆ ನಡೆಯುವ ಧಾರ್ಮಿಕ ಕೈಂಕರ್ಯಗಳಲ್ಲಿ ನೈರ್ಮಾಲ್ಯ ಬಲಿ, ಧ್ವಜಸ್ಥಂಭ ಪೂಜೆ, ಮಹಾಪೂಜೆ, ಸಂಜೆ ಶ್ರೀಭೂತಬಲಿ, ಮಹಾಪೂಜೆ ನಡೆಯಲಿದೆ ಎಂದರು.</p>.<p>25ರಂದು ಸಹ ಇದೇ ಬಗೆಯ ಕೈಂಕರ್ಯಗಳು ನಡೆಯಲಿದ್ದು, 26ರಂದು ಬೆಳಿಗ್ಗೆ ತುಲಾಭಾರ ಸೇವೆ ಇರಲಿದೆ. ಸಂಜೆ ನೃತ್ಯಬಲಿ, ವಸಂತಪೂಜೆ, ದೇವರ ಶಯನೋತ್ಸವಗಳು ಜರುಗಲಿವೆ ಎಂದು ಹೇಳಿದರು.</p>.<p>27ರಂದು ಬೆಳಿಗ್ಗೆ ಕವಾಟಪೂಜೆ, ತೈಲಾಭ್ಯಂಜನ, ಪಂಚಾಮೃತ ಅಭಿಷೇಕದ ನಂತರ ಮಧ್ಯಾಹ್ನ 2.30ಕ್ಕೆ ನಂದಿಪಾರೆಯ ಕಾವೇರಿ ನದಿಯಲ್ಲಿ ದೇವರು ಜಳಕಕ್ಕೆ ಹೊರಡಲಿದೆ. ಸಂಜೆ ದೇವರ ನೃತ್ಯಬಲಿ, ನಡೆ ಭಂಡಾರಗಳು ಜರುಗಲಿವೆ ಎಂದರು.</p>.<p>28ರಂದು ಬೆಳಿಗ್ಗೆ ನವಕ ಕಳಸ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥಪ್ರಸಾದ ವಿತರಣೆಯೊಂದಿಗೆ ಜಾತ್ರಾ ಮಹೋತ್ಸವ ಸಮಾಪ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.</p>.<p>ಸಮಿತಿ ಕಾರ್ಯದರ್ಶಿ ಕಾಶಿ ಕಾರ್ಯಪ್ಪ, ಸದಸ್ಯರಾದ ಎನ್.ಕೆ.ಗಣಪತಿ, ಪಿ.ಕೆ.ಮಹೇಶ್, ಎಂ.ಟಿ.ದೇವಪ್ಪ, ಬಿ.ಎಸ್.ವೇಣುಗೋಪಾಲ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>