ಮಡಿಕೇರಿ: ಇಲ್ಲಿನ ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಸೋಮವಾರ ಸಂಜೆ ಕುಸಿದಿದ್ದ ಮಣ್ಣ ಹಾಗೂ ಮರವನ್ನು ಜಿಲ್ಲಾಡಳಿತ ರಾತ್ರಿ ತೆರವುಗೊಳಿಸಿತು. ಎರಡೂ ಬದಿಯಲ್ಲೂ ಕಿಲೋ ಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿದ್ದ ವಾಹನಗಳು ಸಂಚರಿಸಿದವು.
ರಸ್ತೆಯ ಬದಿಯಲ್ಲಿ ಮಣ್ಣಿನ ರಾಶಿ ಇದ್ದು, ಅದನ್ನೂ ತೆರವು ಮಾಡಿದರೆ, ಗುಡ್ಡದಿಂದ ಮತ್ತಷ್ಟು ಮಣ್ಣು ಜರಿಯಬಹುದು ಎಂಬ ಆತಂಕದಿಂದ ರಸ್ತೆ ಬದಿಯಲ್ಲಿರುವ ಮಣ್ಣಿನ ರಾಶಿಯನ್ನು ಹಾಗೆಯೇ ಬಿಡಲಾಗಿದೆ. ಸದ್ಯ, ವಾಹನಗಳು ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಂಚರಿಸುತ್ತಿವೆ.
ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹಾಗೂ ತಹಶೀಲ್ದಾರ್ ಕಿರಣ್ ಗೌರಯ್ಯ ತೆರವು ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲಿದ್ದರು.