<p><strong>ಸುಂಟಿಕೊಪ್ಪ</strong>: ಇಲ್ಲಿನ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ 54ನೇ ವರ್ಷದ ಮಂಡಲ ಪೂಜೋತ್ಸವವು ಡಿ.26ರಂದು ನಡೆಯಲಿದೆ.</p><p>2018ರ ಪ್ರಕೃತಿ ವಿಕೋಪ, 2020ರ ನಂತರದ ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿಕೊಂಡು ಬಂದಿದ್ದ ಮಂಡಲಪೂಜೋತ್ಸವವು ಇದೀಗ ಮತ್ಯೊಮ್ಮೆ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಬಿಸಿಲಿನ ತಾಪಮಾನ ಮತ್ತು ಬೆಳಿಗ್ಗೆ ಮತ್ತು ರಾತ್ರಿ ಕೊರೆಯುವ ಚಳಿಯಿಂದಾಗಿ ಜ್ವರ, ಶೀತದಂತಹ ಪ್ರಕರಣಗಳು ಹರಡುತ್ತಿರುವ ಆತಂಕವಿದ್ದರೂ, ಎಲ್ಲ ಸಿದ್ಧತೆಗಳೂ ಭರದಿಂದ ಸಾಗಿವೆ. ದೇವಾಲಯದ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.</p><p>ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅಯ್ಯಪ್ಪ ವ್ರತಧಾರಿಗಳ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ನೂರಾರು ಭಕ್ತರು ಮಂಡಲ ಪೂಜೆಗೆ ಹಗಲಿರುಳು ದುಡಿಯುತ್ತಿದ್ದು, ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.</p><p>ಈ ಬಾರಿ ಅದ್ಧೂರಿತನಕ್ಜೆ ಸಾಕ್ಷಿಯಾಗಿ ರಾತ್ರಿ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಶೋಭಯಾತ್ರೆಯನ್ನು ಕೇರಳದ ಸಿಂಗಾರಿ ಮೇಳ ಮುನ್ನಡೆಸಿದರೆ, ಯುವತಿಯರು ದೀಪಗಳನ್ನು ಹಿಡಿದು ಮೆರುಗು ನೀಡಲಿದ್ದಾರೆ. ಅಲ್ಲದೇ, ಸಂಜೆ ವಿಶೇಷ ದೀಪರಾಧನೆ ಮತ್ತು ದುರ್ಗಾಪೂಜೆಯ ಸಹ ನಡೆಯಲಿದೆ.</p><p>ಮಧ್ಯಾಹ್ನ 2 ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ವಿತರಿಸುವ ಹೊಣೆಗಾರಿಕೆಯನ್ನು ದೇವಾಲಯದ ಆಡಳಿತ ಮಂಡಳಿ ಹೊತ್ತುಕೊಂಡಿದೆ. ಈಗಾಗಲೇ ದಾನಿಗಳಿಂದ ಅಕ್ಕಿ, ಬೆಲ್ಲ, ಬೇಳೆ, ಧಾನ್ಯಗಳ ಸಂಗ್ರಹವಾಗಿದೆ. ವ್ರತಧಾರಿಗಳು ಮತ್ತು ಆಡಳಿತ ಮಂಡಳಿ ದೇವಾಲಯದ ಅಲಂಕಾರ ಮಾಡುವುದರಲ್ಲಿ ತಯಾರಿ ನಡೆಸುತ್ತಿದ್ದಾರೆ.</p><p><strong>ದೇವಾಲಯದಲ್ಲಿ ಇಂದಿನ ಪೂಜೆಗಳ ವಿವರ</strong></p><p>ಬೆಳಿಗ್ಗೆ 6.45 ಗಣಪತಿ ಹೋಮ, 7.10ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30 ಚಂಡೆಮೇಳ, 9 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, 11ಕ್ಕೆ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, 12ಕ್ಕೆ ಪಲ್ಲಪೂಜೆ, ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ದೂರ್ವಚನೆ, ಪಂಚಾಮೃತ ಅಭಿಷೇಕ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಆರತಿ ಪೂಜೆ ಹಾಗೂ ಗಂಭೀರ ಪಠಾಕಿ ನಡೆಯಲಿದೆ. ನಂತರ, 1 ಗಂಟೆಯಿಂದ 4 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ವಿಶೇಷ ದೀಪರಾಧನೆ ಮತ್ತು ಅದ್ದೂರಿ ಮೆರವಣಿಗೆ ನಡೆಯಲಿದೆ.</p><p>ಈ ಬಾರಿ 54ನೇ ಮಂಡಲಪೂಜೋತ್ಸವ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಪ್ರಧಾನ ಅರ್ಚಕ ಗಣೇಶ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ (ಪುಟ್ಟ) ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ</strong>: ಇಲ್ಲಿನ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಅಯ್ಯಪ್ಪ ಭಕ್ತರ ನೇತೃತ್ವದಲ್ಲಿ 54ನೇ ವರ್ಷದ ಮಂಡಲ ಪೂಜೋತ್ಸವವು ಡಿ.26ರಂದು ನಡೆಯಲಿದೆ.</p><p>2018ರ ಪ್ರಕೃತಿ ವಿಕೋಪ, 2020ರ ನಂತರದ ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಿಕೊಂಡು ಬಂದಿದ್ದ ಮಂಡಲಪೂಜೋತ್ಸವವು ಇದೀಗ ಮತ್ಯೊಮ್ಮೆ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಮಧ್ಯೆ ಬಿಸಿಲಿನ ತಾಪಮಾನ ಮತ್ತು ಬೆಳಿಗ್ಗೆ ಮತ್ತು ರಾತ್ರಿ ಕೊರೆಯುವ ಚಳಿಯಿಂದಾಗಿ ಜ್ವರ, ಶೀತದಂತಹ ಪ್ರಕರಣಗಳು ಹರಡುತ್ತಿರುವ ಆತಂಕವಿದ್ದರೂ, ಎಲ್ಲ ಸಿದ್ಧತೆಗಳೂ ಭರದಿಂದ ಸಾಗಿವೆ. ದೇವಾಲಯದ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ.</p><p>ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಅಯ್ಯಪ್ಪ ವ್ರತಧಾರಿಗಳ ಸಂಖ್ಯೆ ಈ ಬಾರಿ ಹೆಚ್ಚಾಗಿದೆ. ನೂರಾರು ಭಕ್ತರು ಮಂಡಲ ಪೂಜೆಗೆ ಹಗಲಿರುಳು ದುಡಿಯುತ್ತಿದ್ದು, ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.</p><p>ಈ ಬಾರಿ ಅದ್ಧೂರಿತನಕ್ಜೆ ಸಾಕ್ಷಿಯಾಗಿ ರಾತ್ರಿ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಅಯ್ಯಪ್ಪಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಶೋಭಯಾತ್ರೆಯನ್ನು ಕೇರಳದ ಸಿಂಗಾರಿ ಮೇಳ ಮುನ್ನಡೆಸಿದರೆ, ಯುವತಿಯರು ದೀಪಗಳನ್ನು ಹಿಡಿದು ಮೆರುಗು ನೀಡಲಿದ್ದಾರೆ. ಅಲ್ಲದೇ, ಸಂಜೆ ವಿಶೇಷ ದೀಪರಾಧನೆ ಮತ್ತು ದುರ್ಗಾಪೂಜೆಯ ಸಹ ನಡೆಯಲಿದೆ.</p><p>ಮಧ್ಯಾಹ್ನ 2 ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ವಿತರಿಸುವ ಹೊಣೆಗಾರಿಕೆಯನ್ನು ದೇವಾಲಯದ ಆಡಳಿತ ಮಂಡಳಿ ಹೊತ್ತುಕೊಂಡಿದೆ. ಈಗಾಗಲೇ ದಾನಿಗಳಿಂದ ಅಕ್ಕಿ, ಬೆಲ್ಲ, ಬೇಳೆ, ಧಾನ್ಯಗಳ ಸಂಗ್ರಹವಾಗಿದೆ. ವ್ರತಧಾರಿಗಳು ಮತ್ತು ಆಡಳಿತ ಮಂಡಳಿ ದೇವಾಲಯದ ಅಲಂಕಾರ ಮಾಡುವುದರಲ್ಲಿ ತಯಾರಿ ನಡೆಸುತ್ತಿದ್ದಾರೆ.</p><p><strong>ದೇವಾಲಯದಲ್ಲಿ ಇಂದಿನ ಪೂಜೆಗಳ ವಿವರ</strong></p><p>ಬೆಳಿಗ್ಗೆ 6.45 ಗಣಪತಿ ಹೋಮ, 7.10ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30 ಚಂಡೆಮೇಳ, 9 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, 11ಕ್ಕೆ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, 12ಕ್ಕೆ ಪಲ್ಲಪೂಜೆ, ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ದೂರ್ವಚನೆ, ಪಂಚಾಮೃತ ಅಭಿಷೇಕ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಆರತಿ ಪೂಜೆ ಹಾಗೂ ಗಂಭೀರ ಪಠಾಕಿ ನಡೆಯಲಿದೆ. ನಂತರ, 1 ಗಂಟೆಯಿಂದ 4 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ವಿಶೇಷ ದೀಪರಾಧನೆ ಮತ್ತು ಅದ್ದೂರಿ ಮೆರವಣಿಗೆ ನಡೆಯಲಿದೆ.</p><p>ಈ ಬಾರಿ 54ನೇ ಮಂಡಲಪೂಜೋತ್ಸವ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಪ್ರಧಾನ ಅರ್ಚಕ ಗಣೇಶ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ (ಪುಟ್ಟ) ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>