ಶಾಲೆಯಲ್ಲಿ ಬೆಳೆದ ಬಾಳೆಗೊನೆಯನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಬರುತ್ತಿರುವುದು
ಪೊನ್ನಂಪೇಟೆ ತಾಲ್ಲೂಕಿನ ಬೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಶಾಲೆಯ ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿರುವ ಬಾಳೆಗೊನೆಯಿಂದ ಬಾಳೆಹಣ್ಣುಗಳನ್ನು ಮಕ್ಕಳಿಗೆ ಹಂಚುತ್ತಿರುವುದು

ಅನೇಕ ಸಕಾರಾತ್ಮಕ ಶೈಕ್ಷಣಿಕ ಚಟುವಟಿಕೆಗಳನ್ನೂ ಶಿಕ್ಷಕಿಯರು ಮಾಡುತ್ತಿದ್ದಾರೆ. ಇಲಾಖೆಯ ಅನುದಾನದ ಜತೆಗೆ ತಮ್ಮ ಹಣವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಾದರಿ ಅತ್ಯುತ್ತಮ ಶಾಲೆ.
ಎಂ.ಪ್ರಕಾಶ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ5 ಕಿ.ಮೀ ದೂರದಿಂದ ದಣಿದು ಬರುವ ಮಕ್ಕಳು!
‘ಕಾಡೊಳಗೆ ಇರುವ ಅತ್ತಿಮಾನಿ ಮತ್ತು ಕೂಪು ಎಂಬ ಜನವಸತಿ ಪ್ರದೇಶದಿಂದ ಮಕ್ಕಳು ಸುಮಾರು 5 ಕಿ.ಮೀ ದೂರದಿಂದ ನಡೆದುಕೊಂಡೇ ಶಾಲೆಗೆ ಬರುತ್ತಾರೆ. ದಣಿದು ಬರುವ ಮಕ್ಕಳಿಗೆ ಶಾಲೆಯಲ್ಲಿ ಬೆಳೆದ ಬಾಳೆಹಣ್ಣುಗಳನ್ನು ನೀಡಿ ಅವರಿಗೆ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುತ್ತಿದ್ದೇವೆ. ನಾವೇನೂ ದೊಡ್ಡ ಕೆಲಸ ಮಾಡುತ್ತಿದ್ದೇವೆ ಎಂದು ಅನ್ನಿಸುತ್ತಿಲ್ಲ. ನಮ್ಮ ಕರ್ತವ್ಯವನ್ನಷ್ಟೇ ನಾವು ಮಾಡುತ್ತಿದ್ದೇವೆ’ ಎಂದು ಪ್ರಭಾರ ಮುಖ್ಯಶಿಕ್ಷಕಿ ಇ.ಎಸ್.ಸುಜಾತಾ ಹೇಳುತ್ತಾರೆ.