ಜಿಲ್ಲೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಯಂತ್ರ ಇಲ್ಲದೇ ಜನಸಾಮಾನ್ಯರು ಪರಿತಪಿಸುತ್ತಿರುವ ಕುರಿತು ‘ಪ್ರಜಾವಾಣಿ’ ಸಾಕಷ್ಟು ವರದಿಗಳನ್ನು ಪ್ರಕಟಿಸಿತ್ತು. ತೀರಾ ಈಚೆಗೆ ಫೆ. 4ರಂದು ‘ಕ್ಯಾನ್ಸರ್ಗೆ ಚಿಕಿತ್ಸೆ, ಜಿಲ್ಲೆಯಲ್ಲಿ ಮರೀಚಿಕೆ’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ್ದ ವಿಶೇಷ ವರದಿಯಲ್ಲಿ ಎಂಆರ್ಐ ಸ್ಕ್ಯಾನಿಂಗ್ಗಾಗಿ ಇಲ್ಲಿನ ಜನರು ಹೊರ ಜಿಲ್ಲೆಗಳನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಕುರಿತು ಗಮನ ಸೆಳೆಯಲಾಗಿತ್ತು. ಫೆ. 12ರಂದು ಜಿಲ್ಲೆಗೆ ‘ಎಂಆರ್ಐ ಸ್ಕ್ಯಾನಿಂಗ್ ಕೊಡಿ’ ಎಂಬ ಜನಸಾಮಾನ್ಯರ ಮನವಿಯನ್ನೂ ಪ್ರಕಟಿಸಿತ್ತು.