ಮಡಿಕೇರಿ: ಸಂಪಾಜೆಯ ಕಲ್ಲುಗುಂಡಿ ನೆಲ್ಲಿಕುಮೇರಿ ಗ್ರಾಮದಲ್ಲಿ 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಯಾಗಿದೆ.
ತ್ಯಾಗರಾಜ ಅವರ ಮನೆಯ ಹಿತ್ತಲಲ್ಲಿ ಕಂಡುಬಂದ ಕಾಳಿಂಗ ಸರ್ಪವನ್ನು ಉರಗಪ್ರೇಮಿ ಅರಂತೋಡಿನ ಶಿವಾನಂದ ಕುಕ್ಕುಂಬಳ ಅವರು ಸೆರೆ ಹಿಡಿದಿದ್ದರು. ಅರಣ್ಯ ಇಲಾಖೆಯ ಸಲಹೆಯಂತೆ ಮಂಗಳೂರಿನ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಯಿತು.
ಶರತ್ ಕೀಲಾರು, ಮನೋಹರ್ ಕಳಮೆ, ಕೇಶವ ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ ನಿವಾಸಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಶಿವಾನಂದ ಅವರ ಕಾರ್ಯಕ್ಕೆ ಸಹಾಯ ಮಾಡಿದರು.