ವಿರಾಜಪೇಟೆ: ಮಲ್ಲಂಬಟ್ಟಿ ಸಮೀಪದ ಗ್ರಾಮದಲ್ಲಿ ಶನಿವಾರ ವಾಕಿಂಗ್ ಹೋಗಿ ಮನೆಗೆ ಹಿಂತಿರುಗುತ್ತಿದ್ದ ನಿವೃತ್ತ ಯೋಧರೊಬ್ಬರು ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೈತಾಡಿ ಗ್ರಾಮದ ನಿವೃತ್ತ ಯೋಧ ಐಯ್ಯಮಂಡ ರವಿ (49) ಮೃತಪಟ್ಟವರು. ಮಲ್ಲಂಬಟ್ಟಿಯ ತಿರುವಿನ ಬಳಿ ಕಾರು ಡಿಕ್ಕಿಯಾಯಿತು. ಗ್ರಾಮಸ್ಥರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡು ಕಾರನ್ನು ಮಗುಚಿ ಹಾಕಿದರು. ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆಯ ಪೊಲೀಸರು ಕಾರಿನ ಚಾಲಕನನ್ನು ಬಂಧಿಸಿ ಕಾರನ್ನು ವಶಕ್ಕೆ ಪಡೆದರು.
ಕಾರಿನ ಚಾಲಕ ಬೆಂಗಳೂರಿನವನಾಗಿದ್ದು, ಮಡಿಕೇರಿಯಿಂದ ವಿರಾಜಪೇಟೆ ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ.