<p><strong>ಸುಂಟಿಕೊಪ್ಪ: </strong>2018ರಿಂದ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಂಭವಿಸುತ್ತಿರುವ ಭೀಕರ ಜಲಪ್ರಳಯ ಮತ್ತು ಭೂಕುಸಿತದ ಬಳಿಕ ಈ ವ್ಯಾಪ್ತಿಯ ಗ್ರಾಮಗಳ ಹಲವು ಹೊಳೆಗಳಲ್ಲಿ ಹೂಳಿನ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹೊಳೆಗಳು ಕಣ್ಮರೆಯಾಗುವ ಭೀತಿ ಉಂಟಾಗಿದೆ.</p>.<p>ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಮಾದಾಪುರ ಹೊಳೆ, ಹಟ್ಟಿಹೊಳೆ ಹಾಗೂ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು ಹೊಳೆಯಲ್ಲಿ ಮಣ್ಣು ತುಂಬಿ ನೀರು ಮಾಯವಾಗಿದೆ.</p>.<p>ಹರದೂರು ಹೊಳೆಯು ಹಾರಂಗಿ ಹಿನ್ನೀರಾಗಿದ್ದು, ಇದೀಗ ನೀರು ಸಂಪೂರ್ಣ ಇಳಿಮುಖಗೊಂಡಿದೆ. ಕಳೆದ 2-3 ವರ್ಷಗಳಿಂದ ಸಂಭವಿಸುತ್ತಿರುವ ಭೂಕುಸಿತ ಮತ್ತು ಪ್ರವಾಹದಿಂದ ಹರಿದು ಬಂದ ಮಣ್ಣು ಅಲ್ಲಲ್ಲಿಯೇ ಸಂಗ್ರಹವಾಗಿ ಹೊಳೆಗಳೆ ಮುಚ್ಚಲ್ಪಟ್ಟಿವೆ. ಇದರಿಂದ ಈ ಭಾಗಗಳ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ಬಂದಿದೆ.</p>.<p>ಈ ಹಿಂದೆ ಹಟ್ಟಿಹೊಳೆ, ಮುಕ್ಕೋಡ್ಲು ಸೇರಿದಂತೆ ಈ ಭಾಗದ ಕೆಲವು ಕಡೆ ಬೆಟ್ಟ, ಕಾಫಿ ತೋಟದಲ್ಲಿ ಕುಸಿದ ಮಣ್ಣು ಈ ಹೊಳೆಗಳ ಪಾಲಾಗಿವೆ. ಒಂದು ವೇಳೆ ಮಾದಾಪುರ, ಹಟ್ಟಿಹೊಳೆ, ಹರದೂರು ಹೊಳೆಗಳಲ್ಲಿ ಹೂಳು ತೆಗೆಯದಿದ್ದರೆ ಮೇ, ಜೂನ್ನಲ್ಲಿ ಪ್ರಾರಂಭವಾಗುವ ಮಳೆಗೆ ಹೊಳೆಗಳು ಉಕ್ಕಿ ಮೇಲೇರಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಈ ಭಾಗದ ಎಲ್ಲ ಹೊಳೆಗಳು ಜನವರಿ, ಫೆಬ್ರುವರಿಯವರೆಗೂ ಹರಿಯುತ್ತಿತ್ತು. ಆದರೆ, ಕಳೆದ 2-3 ವರ್ಷಗಳಿಂದ ನವಂಬರ್ನಲ್ಲಿಯೇ ಹೊಳೆಯ ನೀರು ಖಾಲಿಯಾಗುತ್ತಿದ್ದು ಭವಿಷ್ಯದಲ್ಲಿ ಹೊಳೆಯೇ ಮಾಯಾವಾಗಲಿದೆಯೇ ಎಂಬ ಆತಂಕ ಜನರಲ್ಲಿ ಮೂಡಲಾರಂಭಿಸಿದೆ.</p>.<p>ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಭಾಗಗಳಲ್ಲಿ ಹೊಳೆ ಮಾತ್ರವಲ್ಲ. ನದಿ, ತೊರೆಗಳಲ್ಲಿ ಸೇರಿಕೊಂಡ ಪ್ರವಾಹದ ಹೂಳುಗಳನ್ನು ತೆಗೆಯುವಲ್ಲಿ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತೋರಿರುವುದರಿಂದ ಮತ್ತೊಮ್ಮೆ ಪ್ರವಾಹ ಕಂಡುಬಂದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹರದೂರು, ಹಟ್ಟಿಹೊಳೆ ಈ ಭಾಗದಲ್ಲಿ ಹೊಳೆಯ, ತೊರೆಗಳ ಅಕ್ಕಪಕ್ಕದಲ್ಲಿಯೇ ಸೂರು ಕಟ್ಟಿಕೊಂಡು ಬಹುತೇಕ ಜನರು ಬದುಕು ಸಾಗಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಏನಾಗಬಹುದು ಎಂಬ ಕಾತರದಲ್ಲಿ ಇದ್ದಾರೆ ಈ ಭಾಗದ ಜನ.</p>.<p>2018ರಲ್ಲಿ ಸಂಭವಿಸಿದ ಭೂಕುಸಿತ, ಜಲಪ್ರಳಯದ ವೇಳೆ ಈ ಭಾಗದಲ್ಲಿ ಹಲವು ಸಾವು– ನೋವುಗಳು ಸಂಭವಿಸಿದಲ್ಲದೇ, ಮನೆ, ತೋಟ ಕಳೆದುಕೊಂಡು ನಿರ್ಗತಿರಾಗಿದ್ದರು. ಮತ್ತೇ ಅಂತಹ ಪ್ರಾಕೃತಿಕ ವೈಫಲ್ಯ ಸಂಭವಿಸಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.</p>.<p>ಈ ಭಾಗದ ಹೊಳೆಗಳಲ್ಲಿ ಅಷ್ಟೊಂದು ಹೂಳು ತುಂಬಿದ್ದರೂ ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡಿ ತೆರಳುತ್ತಿದ್ದಾರೆ ಎಂದು ಮಾದಾಪುರದ ಮಹಮ್ಮದ್ ಶರೀಫ್ ಅವರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ: </strong>2018ರಿಂದ ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಂಭವಿಸುತ್ತಿರುವ ಭೀಕರ ಜಲಪ್ರಳಯ ಮತ್ತು ಭೂಕುಸಿತದ ಬಳಿಕ ಈ ವ್ಯಾಪ್ತಿಯ ಗ್ರಾಮಗಳ ಹಲವು ಹೊಳೆಗಳಲ್ಲಿ ಹೂಳಿನ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಹೊಳೆಗಳು ಕಣ್ಮರೆಯಾಗುವ ಭೀತಿ ಉಂಟಾಗಿದೆ.</p>.<p>ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಮಾದಾಪುರ ಹೊಳೆ, ಹಟ್ಟಿಹೊಳೆ ಹಾಗೂ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು ಹೊಳೆಯಲ್ಲಿ ಮಣ್ಣು ತುಂಬಿ ನೀರು ಮಾಯವಾಗಿದೆ.</p>.<p>ಹರದೂರು ಹೊಳೆಯು ಹಾರಂಗಿ ಹಿನ್ನೀರಾಗಿದ್ದು, ಇದೀಗ ನೀರು ಸಂಪೂರ್ಣ ಇಳಿಮುಖಗೊಂಡಿದೆ. ಕಳೆದ 2-3 ವರ್ಷಗಳಿಂದ ಸಂಭವಿಸುತ್ತಿರುವ ಭೂಕುಸಿತ ಮತ್ತು ಪ್ರವಾಹದಿಂದ ಹರಿದು ಬಂದ ಮಣ್ಣು ಅಲ್ಲಲ್ಲಿಯೇ ಸಂಗ್ರಹವಾಗಿ ಹೊಳೆಗಳೆ ಮುಚ್ಚಲ್ಪಟ್ಟಿವೆ. ಇದರಿಂದ ಈ ಭಾಗಗಳ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ಬಂದಿದೆ.</p>.<p>ಈ ಹಿಂದೆ ಹಟ್ಟಿಹೊಳೆ, ಮುಕ್ಕೋಡ್ಲು ಸೇರಿದಂತೆ ಈ ಭಾಗದ ಕೆಲವು ಕಡೆ ಬೆಟ್ಟ, ಕಾಫಿ ತೋಟದಲ್ಲಿ ಕುಸಿದ ಮಣ್ಣು ಈ ಹೊಳೆಗಳ ಪಾಲಾಗಿವೆ. ಒಂದು ವೇಳೆ ಮಾದಾಪುರ, ಹಟ್ಟಿಹೊಳೆ, ಹರದೂರು ಹೊಳೆಗಳಲ್ಲಿ ಹೂಳು ತೆಗೆಯದಿದ್ದರೆ ಮೇ, ಜೂನ್ನಲ್ಲಿ ಪ್ರಾರಂಭವಾಗುವ ಮಳೆಗೆ ಹೊಳೆಗಳು ಉಕ್ಕಿ ಮೇಲೇರಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.</p>.<p>ಈ ಭಾಗದ ಎಲ್ಲ ಹೊಳೆಗಳು ಜನವರಿ, ಫೆಬ್ರುವರಿಯವರೆಗೂ ಹರಿಯುತ್ತಿತ್ತು. ಆದರೆ, ಕಳೆದ 2-3 ವರ್ಷಗಳಿಂದ ನವಂಬರ್ನಲ್ಲಿಯೇ ಹೊಳೆಯ ನೀರು ಖಾಲಿಯಾಗುತ್ತಿದ್ದು ಭವಿಷ್ಯದಲ್ಲಿ ಹೊಳೆಯೇ ಮಾಯಾವಾಗಲಿದೆಯೇ ಎಂಬ ಆತಂಕ ಜನರಲ್ಲಿ ಮೂಡಲಾರಂಭಿಸಿದೆ.</p>.<p>ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಭಾಗಗಳಲ್ಲಿ ಹೊಳೆ ಮಾತ್ರವಲ್ಲ. ನದಿ, ತೊರೆಗಳಲ್ಲಿ ಸೇರಿಕೊಂಡ ಪ್ರವಾಹದ ಹೂಳುಗಳನ್ನು ತೆಗೆಯುವಲ್ಲಿ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತೋರಿರುವುದರಿಂದ ಮತ್ತೊಮ್ಮೆ ಪ್ರವಾಹ ಕಂಡುಬಂದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹರದೂರು, ಹಟ್ಟಿಹೊಳೆ ಈ ಭಾಗದಲ್ಲಿ ಹೊಳೆಯ, ತೊರೆಗಳ ಅಕ್ಕಪಕ್ಕದಲ್ಲಿಯೇ ಸೂರು ಕಟ್ಟಿಕೊಂಡು ಬಹುತೇಕ ಜನರು ಬದುಕು ಸಾಗಿಸುತ್ತಿದ್ದಾರೆ. ಮುಂದಿನ ದಿನದಲ್ಲಿ ಏನಾಗಬಹುದು ಎಂಬ ಕಾತರದಲ್ಲಿ ಇದ್ದಾರೆ ಈ ಭಾಗದ ಜನ.</p>.<p>2018ರಲ್ಲಿ ಸಂಭವಿಸಿದ ಭೂಕುಸಿತ, ಜಲಪ್ರಳಯದ ವೇಳೆ ಈ ಭಾಗದಲ್ಲಿ ಹಲವು ಸಾವು– ನೋವುಗಳು ಸಂಭವಿಸಿದಲ್ಲದೇ, ಮನೆ, ತೋಟ ಕಳೆದುಕೊಂಡು ನಿರ್ಗತಿರಾಗಿದ್ದರು. ಮತ್ತೇ ಅಂತಹ ಪ್ರಾಕೃತಿಕ ವೈಫಲ್ಯ ಸಂಭವಿಸಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.</p>.<p>ಈ ಭಾಗದ ಹೊಳೆಗಳಲ್ಲಿ ಅಷ್ಟೊಂದು ಹೂಳು ತುಂಬಿದ್ದರೂ ಸಹ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೇವಲ ಆಶ್ವಾಸನೆ ನೀಡಿ ತೆರಳುತ್ತಿದ್ದಾರೆ ಎಂದು ಮಾದಾಪುರದ ಮಹಮ್ಮದ್ ಶರೀಫ್ ಅವರು ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>