ಈ ಹಿಂದೆ ಹಟ್ಟಿಹೊಳೆ, ಮುಕ್ಕೋಡ್ಲು ಸೇರಿದಂತೆ ಈ ಭಾಗದ ಕೆಲವು ಕಡೆ ಬೆಟ್ಟ, ಕಾಫಿ ತೋಟದಲ್ಲಿ ಕುಸಿದ ಮಣ್ಣು ಈ ಹೊಳೆಗಳ ಪಾಲಾಗಿವೆ. ಒಂದು ವೇಳೆ ಮಾದಾಪುರ, ಹಟ್ಟಿಹೊಳೆ, ಹರದೂರು ಹೊಳೆಗಳಲ್ಲಿ ಹೂಳು ತೆಗೆಯದಿದ್ದರೆ ಮೇ, ಜೂನ್ನಲ್ಲಿ ಪ್ರಾರಂಭವಾಗುವ ಮಳೆಗೆ ಹೊಳೆಗಳು ಉಕ್ಕಿ ಮೇಲೇರಲಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.