<p><strong>ವಿರಾಜಪೇಟೆ: </strong>ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿಯಿತು.</p>.<p>ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆ 11ರ ಬಳಿಕ ತುಂತುರು ಮಳೆ ಆರಂಭಗೊಂಡಿತು. ಬಳಿಕ ನಡುನಡುವೆ ಬಿಡುವು ನೀಡುತ್ತಾ ಸಾಧಾರಣ ಪ್ರಮಾಣದಲ್ಲಿ ಮಳೆ ಮುಂದುವರಿಯಿತು.</p>.<p>ಪಟ್ಟಣ ಮಾತ್ರವಲ್ಲದೆ ಸಮೀಪದ ಆರ್ಜಿ, ಬೇಟೋಳಿ, ರಾಮನಗರ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಕುಕ್ಲೂರು, ಅಂಬಟ್ಟಿ, ಬಾಳುಗೋಡು ಗ್ರಾಮ ವ್ಯಾಪ್ತಿಯಲ್ಲು ಮಳೆ ಸುರಿದಿದೆ.</p>.<p><strong>ರಸ್ತೆಗೆ ಬಿದ್ದ ಮರ<br />ಸಿದ್ದಾಪುರ:</strong> ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗಿದೆ.</p>.<p>ಗಾಳಿಯಿಂದಾಗಿ ಕೆಲವೆಡೆ ಮರಗಳು ಬಿದ್ದಿದ್ದು, ವಿದ್ಯುತ್ ಸ್ಥಗಿತಗೊಂಡಿದೆ. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.</p>.<p><strong>ಬಿರುಸಿನ ಮಳೆ<br />ಸುಂಟಿಕೊಪ್ಪ: </strong>ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.</p>.<p>ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆಯವರೆಗೂ ಮಳೆ ಸುರಿಯಲಾರಂಭಿಸಿತು.</p>.<p>ಬೆಳಿಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣವಿತ್ತು, ದಿಢೀರನೇ 11 ಗಂಟೆ ಸಮಯದಲ್ಲಿ ಗುಡುಗು, ಸಿಡಿಲು ಹಾಗೂ ಗಾಳಿ ಸಹಿತ ಮಳೆ ಸುರಿಯಿತು.</p>.<p>ಗಾಳಿ ಮಳೆಗೆ ಹೋಬಳಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.</p>.<p>ಸಂಜೆಯ ವೇಳೆಗೆ ಮಳೆ ಇಳಿಮುಖಗೊಂಡರೂ ಶೀತಗಾಳಿಯು ಬೀಸುತ್ತಿತ್ತು.</p>.<p>ಕೊಡಗರಹಳ್ಳಿ, ಕಾನ್ಬೈಲ್, ನಾಕೂರು, ಕೆದಕಲ್, ಹರದೂರು, ಕಂಬಿಬಾಣೆ, ಮತ್ತಿಕಾಡು, ಭೂತನಕಾಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.</p>.<p class="Briefhead"><strong>ಗೋಣಿಕೊಪ್ಪಲು ವರದಿ</strong></p>.<p><strong>ಗೋಣಿಕೊಪ್ಪಲು</strong>: ಪಟ್ಟಣ ಸೇರಿದಂತೆ ಹಲವೆಡೆ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.</p>.<p>ಒಂದು ಗಂಟೆಗಳ ಕಾಲ ರಭಸವಾಗಿ ಸುರಿದ ಮಳೆಗೆ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.</p>.<p>ಗೋಣಿಕೊಪ್ಪಲು, ಮಾಯಮುಡಿ, ಪೊನ್ನಪ್ಪಸಂತೆ, ಬಾಳೆಲೆ, ಕುಂದ, ಪೊನ್ನಂಪೇಟೆ, ಕಿರುಗೂರು, ನಲ್ಲೂರು, ತಿತಿಮತಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು.</p>.<p>ಬಳಿಕ ಸಂಜೆವರೆಗೂ ದಟ್ಟ ಮೋಡ ಕವಿದು ತುಂತುರು ಮಳೆ ಬೀಳತೊಡಗಿತು. ಶ್ರೀಮಂಗಲ, ಇರ್ಪು, ಕುಟ್ಟ ಭಾಗಕ್ಕೂ ಮಧ್ಯಾಹ್ನ ಧಾರಾಕಾರ ಮಳೆ ಬಿದ್ದಿತು. ಅಲ್ಲಿನ ತೊರೆ ತೋಡುಗಳಲ್ಲಿ ಮಳೆ ನಿಂತ ಮೇಲೂ ನೀರು ಉಕ್ಕಿ ಹರಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ: </strong>ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿಯಿತು.</p>.<p>ಪಟ್ಟಣದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆ 11ರ ಬಳಿಕ ತುಂತುರು ಮಳೆ ಆರಂಭಗೊಂಡಿತು. ಬಳಿಕ ನಡುನಡುವೆ ಬಿಡುವು ನೀಡುತ್ತಾ ಸಾಧಾರಣ ಪ್ರಮಾಣದಲ್ಲಿ ಮಳೆ ಮುಂದುವರಿಯಿತು.</p>.<p>ಪಟ್ಟಣ ಮಾತ್ರವಲ್ಲದೆ ಸಮೀಪದ ಆರ್ಜಿ, ಬೇಟೋಳಿ, ರಾಮನಗರ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಕುಕ್ಲೂರು, ಅಂಬಟ್ಟಿ, ಬಾಳುಗೋಡು ಗ್ರಾಮ ವ್ಯಾಪ್ತಿಯಲ್ಲು ಮಳೆ ಸುರಿದಿದೆ.</p>.<p><strong>ರಸ್ತೆಗೆ ಬಿದ್ದ ಮರ<br />ಸಿದ್ದಾಪುರ:</strong> ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗಿದೆ.</p>.<p>ಗಾಳಿಯಿಂದಾಗಿ ಕೆಲವೆಡೆ ಮರಗಳು ಬಿದ್ದಿದ್ದು, ವಿದ್ಯುತ್ ಸ್ಥಗಿತಗೊಂಡಿದೆ. ಮುಂಗಾರು ಆರಂಭವಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.</p>.<p><strong>ಬಿರುಸಿನ ಮಳೆ<br />ಸುಂಟಿಕೊಪ್ಪ: </strong>ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.</p>.<p>ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸಂಜೆಯವರೆಗೂ ಮಳೆ ಸುರಿಯಲಾರಂಭಿಸಿತು.</p>.<p>ಬೆಳಿಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣವಿತ್ತು, ದಿಢೀರನೇ 11 ಗಂಟೆ ಸಮಯದಲ್ಲಿ ಗುಡುಗು, ಸಿಡಿಲು ಹಾಗೂ ಗಾಳಿ ಸಹಿತ ಮಳೆ ಸುರಿಯಿತು.</p>.<p>ಗಾಳಿ ಮಳೆಗೆ ಹೋಬಳಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ.</p>.<p>ಸಂಜೆಯ ವೇಳೆಗೆ ಮಳೆ ಇಳಿಮುಖಗೊಂಡರೂ ಶೀತಗಾಳಿಯು ಬೀಸುತ್ತಿತ್ತು.</p>.<p>ಕೊಡಗರಹಳ್ಳಿ, ಕಾನ್ಬೈಲ್, ನಾಕೂರು, ಕೆದಕಲ್, ಹರದೂರು, ಕಂಬಿಬಾಣೆ, ಮತ್ತಿಕಾಡು, ಭೂತನಕಾಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.</p>.<p class="Briefhead"><strong>ಗೋಣಿಕೊಪ್ಪಲು ವರದಿ</strong></p>.<p><strong>ಗೋಣಿಕೊಪ್ಪಲು</strong>: ಪಟ್ಟಣ ಸೇರಿದಂತೆ ಹಲವೆಡೆ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.</p>.<p>ಒಂದು ಗಂಟೆಗಳ ಕಾಲ ರಭಸವಾಗಿ ಸುರಿದ ಮಳೆಗೆ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.</p>.<p>ಗೋಣಿಕೊಪ್ಪಲು, ಮಾಯಮುಡಿ, ಪೊನ್ನಪ್ಪಸಂತೆ, ಬಾಳೆಲೆ, ಕುಂದ, ಪೊನ್ನಂಪೇಟೆ, ಕಿರುಗೂರು, ನಲ್ಲೂರು, ತಿತಿಮತಿ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯಿತು.</p>.<p>ಬಳಿಕ ಸಂಜೆವರೆಗೂ ದಟ್ಟ ಮೋಡ ಕವಿದು ತುಂತುರು ಮಳೆ ಬೀಳತೊಡಗಿತು. ಶ್ರೀಮಂಗಲ, ಇರ್ಪು, ಕುಟ್ಟ ಭಾಗಕ್ಕೂ ಮಧ್ಯಾಹ್ನ ಧಾರಾಕಾರ ಮಳೆ ಬಿದ್ದಿತು. ಅಲ್ಲಿನ ತೊರೆ ತೋಡುಗಳಲ್ಲಿ ಮಳೆ ನಿಂತ ಮೇಲೂ ನೀರು ಉಕ್ಕಿ ಹರಿಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>