ಈ ಸಂಬಂಧ ಕ್ರಿಯಾಶೀಲ ಶಿಕ್ಷಕ ಸಿ.ಎಸ್.ಸತೀಶ್ ವಾರದಿಂದಲೇ ಪ್ರತಿನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು. ಭೂಪಟ, ರಾಷ್ಟ್ರ ನಾಯಕರ, ರಾಷ್ಟ್ರೀಯ ಚಿಹ್ನೆಗಳ ಚಿತ್ರ ಬಿಡಿಸುವುದು, ಮಾದರಿ ತಯಾರಿಸುವುದು, ದೇಶಭಕ್ತಿ ಗೀತೆಗಳನ್ನು ಹಾಡುವುದು, ಪ್ರಬಂಧ ಬರೆಯುವುದು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಅರಿವು ಮೂಡಿಸಿದ್ದರು.