ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಮತ್ತಿತರ ಗ್ರಾಮಗಳ ಗದ್ದೆಗಳಲ್ಲಿ ರೈತರು ನಾಟಿಗಾಗಿ ತುಂಗಾ, ರಾಜಮುಡಿ, ಚಿಪ್ಪಿಗ ಭತ್ತದ ಅಗೆ ಹಾಕಿದ್ದು, ಸಸಿ ಮಡಿ ಬೆಳೆದು ನಿಂತಿದೆ. ಇದು ಐದುವರೆ ತಿಂಗಳ ಬೆಳೆಯಾಗಿದ್ದು, ಕಟಾವಿಗೆ ಬರುತ್ತದೆ. ತಗ್ಗಿನ ಅಥವಾ ಹಳ್ಳ ಗದ್ದೆಗಳಿಗೆ ಉತ್ತಮವಾಗಿದೆ ಎನ್ನುತ್ತಾರೆ ರೈತರು.