ಹೇಮಚಂದ್ರ ಅವರು 2023ರ ಜುಲೈ, 26 ರಂದು ಸಿದ್ದಾಪುರದ ಜಿ.ಎ.ಪಿ.ಎ.ಸಿ.ಎಸ್ ಬ್ಯಾಂಕಿಗೆ ಬ್ಯಾಂಕ್ ಆಫ್ ಬರೋಡಾದ ಸಿದ್ದಾಪುರದ ಶಾಖೆಯ ₹ 70 ಸಾವಿರದ ಚೆಕ್ಕನ್ನು ಸಹಿ ಮಾಡಿ ನೀಡಿದ್ದರು. ಖಾತೆಯಲ್ಲಿ ₹ 99,605 ಬಾಕಿ ಇದ್ದರೂ ಬ್ಯಾಂಕ್ ಆಫ್ ಬರೋಡಾದ ಸಿಬ್ಬಂದಿ ಸುಮಾರು 2 ತಿಂಗಳ ಬಳಿಕ ಖಾತೆಯಲ್ಲಿ ಹಣವಿಲ್ಲ ಎಂದು ಹಿಂಬರಹ ನೀಡಿ ಹಿಂತಿರುಗಿಸಿದ್ದರು. ನಂತರ, ಖಾತೆಯಲ್ಲಿ ಹಣವಿದ್ದರೂ ಇಲ್ಲವೆಂದಿರುವುದು ಬ್ಯಾಂಕಿನವರಿಗೆ ಅರಿವಿಗೆ ಬಂದು, ಇವರ ಖಾತೆಗೆ ಪರಿಹಾರವಾಗಿ ₹ 31 ಸಾವಿರ ಜಮೆ ಮಾಡಿದ್ದರು.