ವಾಹನವನ್ನು ಪಟ್ಟಣದ ಹೊರಭಾಗದಲ್ಲಿ ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಕನಿಷ್ಠ ಆಟೊ ರಿಕ್ಷಾ ಸಂಚಾರವು ಇಲ್ಲ. ಇದೀಗ ಮನೆಗೆ ಅಕ್ಕಿ, ತರಕಾರಿ ಸೇರಿದಂತೆ ಸುಮಾರು 25 ರಿಂದ 30 ಕೆ.ಜಿ ಯಷ್ಟು ಸಾಮಗ್ರಿಗಳನ್ನು ಹೇಗೆ ಸಾಗಿಸಬೇಕೆಂದು ತಿಳಿಯದಾಗಿದೆ ಎಂದು ಸಾರ್ವಜನಿಕರು ಪೊಲೀಸರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂತು.