ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ರಮೇಶ್ ಎಚ್.ಬಿ. ಮಾತನಾಡಿ, ‘ಜಿಲ್ಲೆಯ ಭೂರಹಿತ ಆದಿವಾಸಿ, ದಲಿತ ಸಮುದಾಯ, ಭೂರಹಿತ ಹಿಂದುಳಿದ ವರ್ಗ, ಮೇಲ್ವರ್ಗದ ಜಾತಿಗೆ ಸೇರಿರುವ ಭೂರಹಿತರಿಗೆ ಭೂಮಿಯನ್ನು ನೀಡಬೇಕು. ಎರಡು-ಮೂರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಜಿಲ್ಲೆಯ ಮೇಲ್ಜಾತಿಯ ಸಣ್ಣ ಬೆಳೆಗಾರರಿಗೂ ಕೂಡ ತಲಾ 5 ಎಕರೆ ಸರ್ಕಾರಿ ಭೂಮಿಯನ್ನು ಹಂಚಬೇಕು. ನದಿ ತೀರ ಹಾಗೂ ಅರಣ್ಯದಂಚು ಸೇರಿದಂತೆ ಪೈಸಾರಿಯಲ್ಲಿ ವಾಸ ಮಾಡುವ ಬಡವರಿಗೆ ಸರ್ಕಾರ ಕೂಡಲೇ ಬದಲಿ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.