ಕುರ್ಚಿ ಗ್ರಾಮದಿಂದ ಕೊಡಗಿನ ಗಡಿ ನಿಟ್ಟೂರು ಜಾಗಲೆವರೆಗೂ ನದಿಯ ಎಡ ಬಲದಲ್ಲಿ ಕಾಫಿ ತೋಟಗಳಿವೆ. ಹೀಗಾಗಿ ಬೆಳೆಗಾರರು ಬೇಸಿಗೆಯಲ್ಲಿ ಕಾಫಿ ಹೂ ಅರಳಿಸಲು ನದಿ ನೀರನ್ನು ಬಳಸಿಕೊಳ್ಳುತ್ತಾರೆ. ಕೆಲವು ಕಡೆ ಹರಿಯುವ ನೀರನ್ನು ತಡೆಗಟ್ಟಿ ಅಲ್ಲಿಂದ ನೀರು ತೆಗೆಯುತ್ತಿದ್ದಾರೆ. ಮಾರ್ಚ್ ಕಳೆದ ಬಳಿಕ ಮಳೆ ಬಿದ್ದರೆ ಮತ್ತೆ ನದಿ ಜೀವಕಳೆ ಪಡೆದುಕೊಳ್ಳುತ್ತದೆ. ಈ ವೇಳೆಗೆ ಕಾಫಿ ಬೆಳೆಗಾರರು ನೀರು ಹಾಯಿಸುವುದನ್ನು ನಿಲ್ಲಿಸುತ್ತಾರೆ. ಕಾನೂರು ಬಳಿ ನದಿ ಪಾತ್ರ ಸಣ್ಣ ಕಾಲುವೆಯಂತೆ ಕಂಡು ಬಂದರೆ, ಬಾಳೆಲೆ ನಿಟ್ಟೂರು ಬಳಿ ಸಂಪೂರ್ಣ ಒಣಗಿದ್ದು, ಕೇವಲ ಮರಳು ರಾಶಿ ಕಂಡು ಬರುತ್ತಿದೆ. ಪ್ರವಾಸಿಗರಿಗೆ ಮಾತ್ರ ನಿರಾಸೆ ಉಂಟಾಗಿದೆ.